Advertisement

ತಲೆಗೆ ಏಟಾದರೂ ಪದ್ಮಾವತಿ ಶೂಟಿಂಗ್‌ ಮುಗಿಸಿ ಲಂಡನ್‌ಗೆ ಹಾರಿದ ರಣವೀರ್‌

12:27 PM May 27, 2017 | Team Udayavani |

ಮುಂಬಯಿ : ಬಾಲಿವುಡ್‌ನ‌ ಖ್ಯಾತ ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರ “ಪದ್ಮಾವತಿ’ ಐತಿಹಾಸಿಕ ಕಥಾ ಚಿತ್ರದಲ್ಲಿ ಅಲ್ಲಾವುದ್ದೀನ್‌ ಖೀಲ್‌ಜಿಯಾಗಿ ಮುಖ್ಯ ಪಾತ್ರವಹಿಸುತ್ತಿರುವ ರಣವೀರ್‌ ಸಿಂಗ್‌ಗೆ ಚಿತ್ರದ ಕ್ಲೈಮಾಕ್ಸ್‌ ದೃಶ್ಯದಲ್ಲಿ ತಲೆಗೆ ಗಂಭೀರ ಏಟು ಬಿದ್ದರೂ ತತ್‌ಕ್ಷಣ ಚಿಕಿತ್ಸೆ ಪಡೆದು ಚಿತ್ರದಲ್ಲಿನ ತನ್ನ ಪಾಲಿನ ಶೂಟಿಂಗ್‌ ಮುಗಿಸಿದ ಬಳಿಕ ಲಂಡನ್‌ಗೆ ಹಾರಿದ್ದಾರೆ. 

Advertisement

ರಣವೀರ್‌ ಜತೆಗೆ ದೀಪಿಕಾ ಪಡುಕೋಣೆ ಕೂಡ ಲಂಡನ್‌ಗೆ ಹಾರಿರುವುದಾಗಿ ಬಾಲಿವುಡ್‌ ಗಾಸಿಪ್‌ ಗಳು ಹೇಳುತ್ತಿವೆ. ಬನ್ಸಾಲಿ ಅವರ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಾಣಿ ಪದ್ಮಾವತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ಪದ್ಮಾವತಿ ಚಿತ್ರೀಕರಣದ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ, ಮುಂಬಯಿಯಿ ದಹೀಸರ್‌ನಲ್ಲಿರುವ ರಣವೀರ್‌ ಫ್ಲ್ಯಾಟಿಗೆ ಶಿಫ್ಟ್ ಆಗಿದ್ದರು ಎಂಬ ಸುದ್ದಿ ಕೂಡ ಜೋರಾಗಿ ಗುಲ್ಲೆಬ್ಬಿಸಿರುವದು ಸತ್ಯ. 

ಪದ್ಮಾವತಿ ಚಿತ್ರದಲ್ಲಿನ ತನ್ನ ಪ್ರಮುಖ ಪಾತ್ರವಾಗಿ ಅಲ್ಲಾವುದ್ದೀನ್‌ ಖೀಲ್‌ಜಿ ಆಗಿ ಅತ್ಯಂತ ತನ್ಮಯತೆ ಮತ್ತು ಬದ್ಧತೆಯೊಂದಿಗೆ ನಟಿಸುತ್ತಿರುವ 31ರ ಹರೆಯದ ರಣವೀರ್‌ಗೆ, ಮುಂಬಯಿ ಹೊರವಲಯದಲ್ಲಿ ನಡೆಯುತ್ತಿದ್ದ ಚಿತ್ರದ ಕ್ಲೈಮಾಕ್ಸ್‌ ಶೂಟಿಂಗ್‌ ವೇಳೆ ತಲೆಗೆ ಏಟಾಗಿತ್ತು.

ಒಡನೆಯೇ ಪ್ರಥಮ ಚಿಕಿತ್ಸೆ ಪಡೆದು ಮತ್ತೆ ಶೂಟಿಂಗ್‌ ಮುಂದುವರಿಸಿದ ರಣವೀರ್‌ಗೆ, ತಲೆಗಾದ ಗಾಯದಿಂದ ರಕ್ತ ಜೋರಾಗಿ ಸುರಿಯುತ್ತಿರುವುದು ಗಮನಕ್ಕೆ ಬಂತು. ಇದರ ಗಂಭೀರತೆಯನ್ನು ಮನಗಂಡ ರಣವೀರ್‌ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ತುರ್ತು ಚಿಕಿತ್ಸೆಯನ್ನು ಪಡೆದುಕೊಂಡರು. ಅವರ ತಲೆಗಾದ ಆಳವಾದ ಗಾಯಕ್ಕೆ ಹಲವಾರು ಸ್ಟಿಚ್‌ಗಳನ್ನು ಹಾಕಲಾಯಿತು. 

ಆ ಬಳಿಕ ಮತ್ತೆ ಶೂಟಿಂಗ್‌ಗೆ ಹಾಜರಾದ ರಣವೀರ್‌ ತನ್ನ ಪಾಲಿನ ಚಿತ್ರೀಕರಣವನ್ನು ದೃಢಸಂಕಲ್ಪದಿಂದ ಮುಗಿಸಿಯೇ ಬಿಟ್ಟರು. 

Advertisement

ಅದಾಗಿ ರಣವೀರ್‌ ತನ್ನ ಪೂರ್ವ ಯೋಜಿತ ರಜಾ ಕಾಲದ ಪ್ರವಾಸಾರ್ಥವಾಗಿ ಲಂಡನ್‌ಗೆ ಹಾರಿದರು. ಅಲ್ಲಿ ಅವರು ತನ್ನ ಅಚ್ಚುಮೆಚ್ಚಿನ ಫ‌ುಟ್ಬಾಲ್‌ ಲೀಗ್‌ ಮ್ಯಾಚಿನ ಫೈನಲ್‌ ಪಂದ್ಯ (ಜೂನ್‌ 3), ಮರುದಿನ ಬರ್ಮಿಂಗಂ ನಲ್ಲಿ ನಡೆಯಲಿರುವ ಭಾರತ – ಪಾಕ್‌ ಚ್ಯಾಂಪ್ಯನ್ಸ್‌ ಟ್ರೋಫಿ ಪಂದ್ಯವನ್ನು ವೀಕ್ಷಿಸುವರು. ಅಂದ ಹಾಗೆ ರಣವೀರ್‌ಗೆ ಮೊದಲನಿಂದಲೂ ಕ್ರೀಡೆಯಲ್ಲಿ ವಿಪರೀತವಾದ ಆಸಕ್ತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next