Advertisement

ಯುವ ದಸರಾದಲ್ಲಿ ರಾನು ಮಂಡಲ್‌ ಕಾರ್ಯಕ್ರಮ

11:29 PM Sep 30, 2019 | Team Udayavani |

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಯುವ ದಸರಾದಲ್ಲಿ ತೇರಿ ಮೇರಿ ಕಹಾನಿ ಗೀತೆಯ ಮೂಲಕ ಖ್ಯಾತಿಗೆ ಬಂದ ಕೋಲ್ಕತಾದ ರಾನು ಮಂಡಲ್‌ ಕಾರ್ಯಕ್ರಮ ನೀಡಲಿದ್ದಾರೆ.

Advertisement

ಅ.1 ರಿಂದ 6 ರವರೆಗೆ ನಡೆಯುವ ಯುವ ದಸರಾದ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಲಿದ್ದು, ಈ ವೇಳೆ ರಾತ್ರಿ 7.30 ರಿಂದ 7.45ರ ಅವಧಿಯಲ್ಲಿ ಗೌರವ ಸಮರ್ಪಣೆ ಮಾಡಲು ರಾನು ಮಂಡಲ್‌ ಅವರನ್ನು ಆಹ್ವಾನಿಸಿದ್ದು, ಗೌರವ ಸ್ವೀಕರಿಸಿದ ಬಳಿಕ ಪ್ರೇಕ್ಷಕರ ಒತ್ತಾಯದ ಮೇರೆಗೆ ರಾನು ಮಂಡಲ್‌ ತಮ್ಮ ಕಂಠಸಿರಿಯನ್ನು ಪ್ರದರ್ಶಿಸಿ, ರಂಜಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next