Advertisement

ರ‍್ಯಾಂಕ್ ವಿದ್ಯಾರ್ಥಿ ಯಶಸ್‌ ಗೌಡಗೆ ಚುಂಚಶ್ರೀಗಳಿಂದ ಸನ್ಮಾನ

11:08 PM May 18, 2023 | Team Udayavani |

ಚಿಕ್ಕಬಳ್ಳಾಪುರ: ಇತ್ತೀಚೆಗೆ ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ನಗರದ ಬಿಜಿಎಸ್ ಶಾಲೆಯ ವಿದ್ಯಾರ್ಥಿ ಯಶಸ್‌ಗೌಡರನ್ನು ಗುರುವಾರ ಚುಂಚಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಸನ್ಮಾನಿಸಿದರು.

Advertisement

ಶಾಲೆಗೆ ಆಗಮಿಸಿದ್ದ ಚುಂಚಶ್ರೀಗಳು ಯಶಸ್‌ಗೌಡ ಹಾಗೂ ಅವರ ಪೋಷಕರಾದ ಭಾಗ್ಯಮ್ಮ ಹಾಗೂ ನಾರಾಯಣಸ್ವಾಮಿರನ್ನು ಕೂಡ ಚುಂಚಶ್ರೀಗಳು ಸನ್ಮಾನಿಸಿ ಅಭಿನಂದಿಸಿ ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಶುಭ ಕೋರಿದರು.

ಇದೇ ವೇಳೆ ಶ್ರೀಗಳು, ಯಶಸ್‌ಗೌಡ, ದಂಪತಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ.ಎನ್.ಶಿವರಾನರೆಡ್ಡಿ, ಬಿಜಿಎಸ್ ಶಾಲೆಯ ಮುಖ್ಯ ಶಿಕ್ಷಕರಾದ ಡಿ.ಸಿ.ಮೋಹನ್ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next