Advertisement

ರಣಜಿ ಸೆಮಿಫೈನಲ್‌ಗೆ ಇಶಾಂತ್‌ ಶರ್ಮ ಇಲ್ಲ

07:15 AM Dec 16, 2017 | Team Udayavani |

ಹೊಸದಿಲ್ಲಿ: ದಿಲ್ಲಿ ತಂಡದ ನಾಯಕ ಹಾಗೂ ವೇಗದ ಬೌಲರ್‌ ಇಶಾಂತ್‌ ಶರ್ಮ ಗಾಯಾಳಾಗಿ ರಣಜಿ ಟ್ರೋಫಿ ಸೆಮಿಫೈನಲ್‌ನಿಂದ ಹೊರಗುಳಿಯಲಿದ್ದಾರೆ. ಬಂಗಾಲ ವಿರುದ್ಧದ ಈ ಪಂದ್ಯ ರವಿವಾರದಿಂದ ಪುಣೆಯಲ್ಲಿ ಆರಂಭವಾಗಲಿದೆ.

Advertisement

ಶ್ರೀಲಂಕಾ ವಿರುದ್ಧ ಹೊಸದಿಲ್ಲಿಯಲ್ಲಿ ನಡೆದ ಅಂತಿಮ ಟೆಸ್ಟ್‌ ಪಂದ್ಯದ ವೇಳೆ ಇಶಾಂತ್‌ ಪಾದದ ನೋವಿಗೊಳಗಾಗಿದ್ದರು. ಕಠಿನ ದಕ್ಷಿಣ ಆಫ್ರಿಕಾ ಪ್ರವಾಸ ಎದುರಿರುವುದರಿಂದ ಇಶಾಂತ್‌ಗೆ ಹೆಚ್ಚಿನ ವಿಶ್ರಾಂತಿ ನೀಡುವ ತೀರ್ಮಾನಕ್ಕೆ ಬರಲಾಗಿದೆ. ಅತ್ತ ಟೀಮ್‌ ಇಂಡಿಯಾ ಸದಸ್ಯರಾದ ಮೊಹಮ್ಮದ್‌ ಶಮಿ ಮತ್ತು ವೃದ್ಧಿಮಾನ್‌ ಸಾಹಾ ಬಂಗಾಲ ತಂಡವನ್ನು ಪ್ರತಿನಿಧಿಸಲಿದ್ದಾರೆ. ಹೀಗಾಗಿ ತಂಡ ಹೆಚ್ಚು ಶಕ್ತಿಶಾಲಿಯಾಗಿ ಗೋಚರಿಸುತ್ತಿದೆ. ಇಂಥ ಸ್ಥಿತಿಯಲ್ಲಿ ಇಶಾಂತ್‌ ಗೈರು ತಂಡಕ್ಕೆ ದೊಡ್ಡ ಹೊಡೆತ ನೀಡುವುದು ಖಚಿತ. ನವದೀಪ್‌ ಸೈನಿ, ವಿಕಾಸ್‌ ತೋಕಾಸ್‌ ಮೇಲೆ ಹೆಚ್ಚಿನ ಬೌಲಿಂಗ್‌ ಭಾರ ಬೀಳಲಿದೆ. ಆಕಾಶ್‌ ಸುದಾನ್‌ ಹೆಚ್ಚುವರಿ ಪೇಸ್‌ ಬೌಲರ್‌ ಆಗಿದ್ದಾರೆ. ಇಶಾಂತ್‌ ಅನುಪಸ್ಥಿತಿಯಲ್ಲಿ ರಿಷಬ್‌ ಪಂತ್‌ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್‌ ಸರಣಿಗಾಗಿ ಆಯ್ಕೆಯಾದ ಕ್ರಿಕೆಟಿಗರಿಗೆ ರಣಜಿ ಸೆಮಿಫೈನಲ್‌ ಆಡಲು ಬಿಸಿಸಿಐ ಅವಕಾಶ ಕಲ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next