Advertisement

ರಣಜಿ ತಂಡದಲ್ಲಿ ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ

11:16 PM Feb 08, 2022 | Team Udayavani |

ರಾಜ್‌ಕೋಟ್‌/ಮುಂಬಯಿ: ತನ್ನ “ಟೆಸ್ಟ್‌ ಸ್ಪೆಷಲಿಸ್ಟ್‌’ ಖ್ಯಾತಿಗೆ ಚ್ಯುತಿ ತಂದುಕೊಂಡಿರುವ ಚೇತೇಶ್ವರ್‌ ಪೂಜಾರ ಮತ್ತು ತೀವ್ರ ರನ್‌ ಬರಗಾಲದಲ್ಲಿರುವ ಅಜಿಂಕ್ಯ ರಹಾನೆ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಸೌರಾಷ್ಟ್ರ ಹಾಗೂ ಮುಂಬಯಿ ತಂಡವನ್ನು ಇವರು ಪ್ರತಿನಿಧಿಸುವರು.

Advertisement

ಸ್ಪೀಡ್‌ಸ್ಟರ್‌ ಜೈದೇವ್‌ ಉನಾದ್ಕತ್‌ ಸೌರಾಷ್ಟ್ರ ತಂಡದ ಹಾಗೂ ಆರಂಭಕಾರ ಪೃಥ್ವಿ ಶಾ ಮುಂಬಯಿ ತಂಡದ ನಾಯಕರಾಗಿದ್ದಾರೆ.

ಈ ಎರಡೂ ತಂಡಗಳು ಎಲೈಟ್‌ “ಡಿ’ ವಿಭಾಗದಲ್ಲಿ ಸ್ಥಾನ ಪಡೆದಿವೆ. ಒಡಿಶಾ, ಗೋವಾ ಈ ವಿಭಾಗದ ಉಳಿದ ತಂಡಗಳು.

ಫೆ. 17ರಿಂದ…
ಈ ಬಾರಿಯ ರಣಜಿ ಟ್ರೋಫಿ ಪಂದ್ಯಾವಳಿಯ ಮೊದಲ ಹಂತ ಫೆ. 17ರಿಂದ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next