Advertisement

ರಣಜಿ: ಪಾರ್ಥಿವ್‌ ಮರಳಿ ನಾಯಕ

01:00 AM Jan 13, 2019 | |

ಅಹ್ಮದಾಬಾದ್‌: ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ವಿಕೆಟ್‌ ಕೀಪರ್‌ ಪಾರ್ಥಿವ್‌ ಪಟೇಲ್‌ ಮರಳಿ ಗುಜರಾತ್‌ ತಂಡದ ನೇತೃತ್ವ ವಹಿಸಲಿದ್ದಾರೆ.

Advertisement

ಟೀಮ್‌ ಇಂಡಿಯಾದ ಜತೆಗೆ ಆಸ್ಟ್ರೇಲಿಯ ಪ್ರವಾಸದಲ್ಲಿದ್ದ ಕಾರಣ ಪಾರ್ಥಿವ್‌ಗೆ ರಾಜ್ಯ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಿರಲಿಲ್ಲ. ಪ್ರಿಯಾಂಕ್‌ ಪಾಂಚಾಲ್‌ ಗುಜರಾತ್‌ ತಂಡವನ್ನು ಮುನ್ನಡೆಸಿ ನಾಕೌಟ್‌ ಹಂತಕ್ಕೆ ಮುಟ್ಟಿಸಿದ್ದರು. ಪಾರ್ಥಿವ್‌ ಜತೆಗೆ ಅಕ್ಷರ್‌ ಪಟೇಲ್‌, ಪೀಯೂಷ್‌ ಚಾವ್ಲಾ ಕೂಡ ಕ್ವಾರ್ಟರ್‌ ಫೈನಲ್‌ಗೆ ಲಭ್ಯರಾಗಲಿದ್ದಾರೆ ಎಂದು ಕೋಚ್‌ ಹಿತೇಶ್‌ ಮಜುಮಾªರ್‌ ಹೇಳಿದ್ದಾರೆ.

ಗುಜರಾತ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಕೇರಳವನ್ನು ಎದುರಿಸಲಿದ್ದು, ಈ ಪಂದ್ಯ ಜ. 15ರಿಂದ ವಯನಾಡ್‌ನ‌ “ಕೃಷ್ಣಗಿರಿ ಸ್ಟೇಡಿಯಂ’ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next