Advertisement

ತ.ನಾಡು ನಿಧಾನ ಬ್ಯಾಟಿಂಗ್‌

11:16 PM Jan 13, 2020 | Team Udayavani |

ಚೆನ್ನೈ: ಮುಂಬಯಿ ಎದುರಿನ ರಣಜಿ ಪಂದ್ಯದಲ್ಲಿ ಆತಿಥೇಯ ತಮಿಳುನಾಡು ನಿಧಾನ ಗತಿಯ ಬ್ಯಾಟಿಂಗ್‌ ನಡೆಸಿ ಅಚ್ಚರಿ ಹುಟ್ಟಿಸಿದೆ. ವಿಕೆಟ್‌ ನಷ್ಟವಿಲ್ಲದೆ 66 ರನ್‌ ಮಾಡಿದಲ್ಲಿಂದ 3ನೇ ದಿನದಾಟ ಮುಂದುವರಿಸಿ, 7 ವಿಕೆಟಿಗೆ 249 ರನ್‌ ಮಾಡಿದೆ. ಮುಂಬಯಿ ಮೊದಲ ಇನ್ನಿಂಗ್ಸ್‌ನಲ್ಲಿ 488 ರನ್‌ ಗಳಿಸಿತ್ತು.

Advertisement

ಮಂಗಳವಾರ ಪಂದ್ಯದ ಅಂತಿಮ ದಿನವಾಗಿದ್ದು, ತಮಿಳುನಾಡಿನ ಇನ್ನಿಂಗ್ಸ್‌ ಮುನ್ನಡೆಯ ಸಾಧ್ಯತೆ ಬಹುತೇಕ ದೂರಾಗಿದೆ. ಆರ್‌. ಅಶ್ವಿ‌ನ್‌ 32 ರನ್‌ (96 ಎಸೆತ), ಆರ್‌. ಸಾಯಿಕಿಶೋರ್‌ 17 ರನ್‌ (114 ಎಸೆತ) ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಕೌಶಿಕ್‌ ಗಾಂಧಿ 60, ಅಭಿನವ್‌ ಮುಕುಂದ್‌ 58 ರನ್‌ ಕೊಡುಗೆ ಸಲ್ಲಿಸಿದರು. ಮುಂಬಯಿ ಪರ ಶಮ್ಸ್‌ ಮುಲಾನಿ, ತುಷಾರ್‌ ದೇಶಪಾಂಡೆ ಮತ್ತು ರಾಯ್‌ಸ್ಟನ್‌ ಡಾಯಸ್‌ ತಲಾ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next