Advertisement
ಎಡಗೈ ಬ್ಯಾಟಿಂಗ್ ಆಲ್ರೌಂಡರ್ ಆಗಿರುವ ಆರ್ಯಮನ್ ಬಿರ್ಲಾ ಮಂಗಳ ವಾರ ಮಧ್ಯಪ್ರದೇಶ ರಣಜಿ ತಂಡಕ್ಕೆ ಆಯ್ಕೆ ಯಾದರು. ಸಾಮಾನ್ಯವಾಗಿ ಶ್ರೀಮಂತ ಉದ್ಯಮಿಗಳ ಕುಟುಂಬದವರು ಕ್ರೀಡಾಕ್ಷೇತ್ರ ದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಆರ್ಯಮನ್ ಅಪವಾದವಾದರು. ಹಾಗೆಯೇ ಬಿರ್ಲಾ ಗ್ರೂಪ್ ಈವರೆಗೆ ಐಪಿಎಲ್ನಿಂದಲೂ ಬಹಳ ದೂರ ಉಳಿದಿದ್ದು, ಯಾವುದೇ ಫ್ರಾಂಚೈಸಿಯನ್ನೂ ಖರೀದಿಸಿಲ್ಲ. ಹೀಗಾಗಿ ಆರ್ಯಮನ್ ಅವರ ರಣಜಿ ಪ್ರವೇಶ ಸಹಜವಾಗಿಯೇ ದೇಶದ ಕ್ರಿಕೆಟ್ ಹಾಗೂ ಉದ್ಯಮ ರಂಗಗಳೆರಡರಲ್ಲೂ ಭಾರೀ ಸಂಚಲನ ಮೂಡಿಸಿದೆ!
ಮುಂಬಯಿಯಲ್ಲಿ ಕಾಮರ್ಸ್ ಪದವಿ ಪಡೆದಿರುವ ಆರ್ಯಮನ್ ಬಿರ್ಲಾ ತವರಿನಲ್ಲಿ ಕ್ರಿಕೆಟ್ ಅವಕಾಶ ಸಿಗದ ಕಾರಣ ಮಧ್ಯಪ್ರದೇಶಕ್ಕೆ ಹೋಗಬೇಕಾಯಿತು ಎಂದು ಅವರ ತಾಯಿ ನೀರಜಾ ಮಿಶ್ರಾ ಹೇಳಿದ್ದಾರೆ. ನ. 17ರಿಂದ ಮಧ್ಯಪ್ರದೇಶ ತಂಡ ಇಂದೋರ್ನಲ್ಲಿ ತಮಿಳು ನಾಡು ವಿರುದ್ಧ ರಣಜಿ ಪಂದ್ಯವಾಡಲಿದ್ದು, ಆರ್ಯಮನ್ ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆ ಮಾಡುವುದು ಬಹುತೇಕ ಖಚಿತ.