Advertisement

ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ

12:01 PM Nov 15, 2017 | |

ಮುಂಬಯಿ: ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಪುಂಜಾಲಕಟ್ಟೆ ಇದರ ವಾರ್ಷಿಕ ರಾಣಿ ಅಬ್ಬಕ್ಕ ಪ್ರಶಸ್ತಿಗೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಆಯ್ಕೆಯಾಗಿದ್ದಾರೆ.

Advertisement

ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಪುಂಜಾಲಕಟ್ಟೆ ಇದರ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಸಾರಥ್ಯ ಮತ್ತು ಕರ್ನಾಟಕ ರಾಜ್ಯ
ಅಮೆಚೂರ್‌ ಕಬಡ್ಡಿ ಅಸೋಸಿಯೇಶನ್‌ನ ಸಹಭಾಗಿತ್ವ ಹಾಗೂ
ಮುಂಬಯಿ ಉದ್ಯಮಿ ಸುಂದರರಾಜ್‌ ಹೆಗ್ಡೆ ಇವರ ಸಹಯೋಗ
ದೊಂದಿಗೆ  34ನೇ ವಾರ್ಷಿಕ ಹೊನಲು ಬೆಳಕಿನ ಪುರುಷರ ಮುಕ್ತ ವಿಭಾಗ ಹಾಗೂ ಮಹಿಳಾ ಮುಕ್ತ ವಿಭಾಗದ ಸ್ವಸ್ತಿಕ್‌ ಪ್ರೊ ಕಬಡ್ಡಿ

ಪಂದ್ಯಾಟ ಹಾಗೂ 60 ಕೆಜಿ ವಿಭಾಗದ ಪಂದ್ಯಾಟ ಮತ್ತು ರಾಣಿ
ಅಬ್ಬಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನ. 18 ಮತ್ತು ನ. 19ರಂದು ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ.

ನ. 18ರಂದು ಬೆಳಗ್ಗೆ  9.30 ರಿಂದ  ವಾಮದಪದವು ಶ್ರೀ ಗಣೇಶ ಮಂದಿರದಿಂದ ರಾಣಿ ಅಬ್ಬಕ್ಕ ಕ್ರೀಡಾಜ್ಯೋತಿ ಪ್ರಜ್ವಲನೆಯೊಂದಿಗೆ ದ್ವಿದಿನಗಳ ಕಾರ್ಯಕ್ರಮ ಆರಂಭಗೊಳ್ಳುವುದು. ಬೆಳಗ್ಗೆ 10.30ರಿಂದ ಬಂಗ್ಲೆ  ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ ಕ್ರೀಡಾಜ್ಯೋತಿ ಬೆಳಗಿಸಿ ಸ್ವಸ್ತಿಕ್‌ ಪ್ರೊ ಕಬಡ್ಡಿ ಪಂದ್ಯಾಟಕ್ಕೆ ಹಾಗೂ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಜೆ 4.30 ಕ್ಕೆ 60 ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟಕ್ಕೆ  ಚಾಲನೆ ನೀಡಲಿದ್ದಾರೆ.

ನ. 19ರಂದು ಬೆಳಗ್ಗೆ 10ರಿಂದ ವಿಧಾನ ಪರಿಷತ್ತ್ ಸದಸ್ಯ ಕ್ಯಾಪ್ಟನ್‌  ಗಣೇಶ್‌ ಕಾರ್ಣಿಕ್‌ ರಾಣಿ ಅಬ್ಬಕ್ಕ ಮುಕ್ತ ವಿಭಾಗದ ಪಂದ್ಯಾಟಕ್ಕೆ  ಚಾಲನೆ ನೀಡಲಿದ್ದಾರೆ.  ಸಂಜೆ 7ರಿಂದ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಈ ಸಂದರ್ಭದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರಿಗೆ  “ರಾಣಿ ಅಬ್ಬಕ್ಕ ಪ್ರಶಸ್ತಿ’ ಪ್ರದಾನಿಸಿ ಗೌರವಿಸಲಾಗುವುದು. ಹಾಗೂ ಕ್ರೀಡಾಪಟುಗಳಾದ ಕರುಣಾಕರ ಶೆಟ್ಟಿ ಮತ್ತು ಹೇಮಚಂದ್ರ ಬಬ್ಬುಕಟ್ಟೆ, ಸಮಾಜ ಸೇವಕ ಬಾಲಕೃಷ್ಣ ರೈ. ಹಿರಿಯ ಕಬ್ಬಡ್ಡಿಪಟು ನಾರಾಯಣ ಪೂಜಾರಿ ಡೆಚ್ಚಾರು ಅವರಿಗೂ ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್‌ಕುಮಾರ್‌ ಕಟೀಲು ಮತ್ತು ಯುವ ರಾಜಕಾರಣಿ ರಾಜೇಶ್‌ ನಾಯ್ಕ ಉಳೆಪಾಡಿಗುತ್ತು ಆಗಮಿಸಿ ಪ್ರಶಸ್ತಿ ಪ್ರದಾನಿಸಿ ಗೌರವಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next