Advertisement

ರಂಗನತಿಟ್ಟಲ್ಲಿ ಪಕ್ಷಿ ಗಣತಿ ಕಾರ್ಯ

06:40 AM May 14, 2018 | Team Udayavani |

ಶ್ರೀರಂಗಪಟ್ಟಣ: ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿರುವ ವಿದೇಶಿ ಪಕ್ಷಿಗಳು ಸೇರಿ ಇತರ ಪಕ್ಷಿಗಳ 2ನೇ ಸುತ್ತಿನ
ಗಣತಿ ಕಾರ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲ ನೇತೃತ್ವದಲ್ಲಿ ಭಾನುವಾರ ನಡೆಯಿತು.

Advertisement

ಮೈಸೂರು ನೇಚರ್‌ ಬರ್ಡ್ಸ್‌ ಗ್ರೂಪ್‌ ಹಾಗೂ ಬೆಂಗಳೂರು ಬರ್ಡ್ಸ್‌ ಗ್ರೂಪ್‌ನ ಸದಸ್ಯರು ಸೇರಿ ಇತರೆ 80ಕ್ಕೂ
ಹೆಚ್ಚು ಮಂದಿ ಪಕ್ಷಿ ತಜ್ಞರು ಭಾಗವಹಿಸಿದ್ದರು. ರಂಗನತಿಟ್ಟು ಪಕ್ಷಿಧಾಮದಲ್ಲಿನ ಐಲ್ಯಾಂಡ್‌ ಪ್ರದೇಶದಲ್ಲಿ ಯಾವ ಜಾಗ 
ದಲ್ಲಿ ಯಾವ ಮರಗಳ ಮೇಲೆ ಯಾವ ಪಕ್ಷಿಗಳಿಗೆ ಅನುಕೂಲವಿರುತ್ತದೆ. ಅಲ್ಲಿ ವಾಸಿಸುವ ಪಕ್ಷಿಗಳ ಸ್ಥಳ ಪರಿಶೀಲನೆ
ನಡೆಸಿ ಮಾಹಿತಿ ಸಂಗ್ರಹಿಸಿದರು. ಕಳೆದ ಮಾರ್ಚ್‌ನಲ್ಲಿ ಮೊದಲ ಸುತ್ತಿನ ಗಣತಿ ಕಾರ್ಯ ನಡೆಸಲಾಗಿತ್ತು.
ಹೀಗೆ 3 ತಿಂಗಳಿಗೊಮ್ಮೆ ಗಣತಿ ಕಾರ್ಯ ನಡೆಸಿ ಒಂದು ವರ್ಷದಲ್ಲಿ ಒಂದು ಹಕ್ಕಿ ಅದರ ವಾಸ, ಯಾವ ಮರ
ಬಳಕೆ, ಯಾವ ಗೂಡಿನಲ್ಲಿ ವಾಸ ಮಾಡುತ್ತದೆ ಎಂಬ ಬಗ್ಗೆ ತಜ್ಞರು ಮಾಹಿತಿ ಕಲೆ ಹಾಕಿ ಅದರ ಗಣತಿ ಮಾಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next