Advertisement

ರಣಹೇಡಿ: ಮತ್ತೆ ಗ್ರಾಮ್ಯ ಸೊಗಡಿನ ಸಂಗೀತದೊಂದಿಗೆ ಮಿಂಚಿದ ಮನೋಹರ್!

10:14 AM Nov 07, 2019 | Naveen |

ವಿ. ಮನೋಹರ್ ಕನ್ನಡ ಚಿತ್ರರಂಗಕ್ಕೆ ಹೊಸಾ ಬಗೆಯ ಹಾಡುಗಳಿಂದ ಶೃಂಗರಿಸಿದ ಸಂಗೀತ ಮಾಂತ್ರಿಕ. ಇವರ ಗರಡಿಯಿಯಲ್ಲಿ ಪಳಗಿದ ಪ್ರತಿಭೆಗಳೇ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಮಿಂಚುತ್ತಿದ್ದಾರೆ. ಈ ಕಾರಣದಿಂದಲೇ ಮನೋಹರ್ ಒಂದು ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆಂದರೆ ಆ ಬಗ್ಗೆ ಕುತೂಹಲ ಮೂಡಿಕೊಳ್ಳುತ್ತದೆ. ಇದೀಗ ಇದೇ ನವೆಂಬರ್ 22ರಂದು ಬಿಡುಗಡೆಗೆ ರೆಡಿಯಾಗಿರೋ ರಣಹೇಡಿ ಕೂಡಾ ಈ ಕಾರಣದಿಂದಲೇ ಗಮನ ಸೆಳೆದುಕೊಂಡಿತ್ತು. ಈ ಚಿತ್ರದ ವಿ ಮನೋಹರ್ ಸಂಗೀತ ನಿರ್ದೇಶನದ ಹಾಡುಗಳೆಲ್ಲವೂ ಈಗ ಹಿಟ್ ಆಗಿವೆ. ಈ ಮೂಲಕವೇ ಸದರಿ ಸಿನಿಮಾ ಬಗ್ಗೆ ಪ್ರೇಕ್ಷಕರೆಲ್ಲ ಆಕರ್ಷಿತರಾಗಿದ್ದಾರೆ.

Advertisement

ಇದು ಸುರೇಶ್ ನಿರ್ಮಾಣ ಮಾಡಿ, ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಕರ್ಣ ಕುಮಾರ್ ಈ ಮೂಲಕ ನಾಯಕನಾಗಿ ಭಡ್ತಿ ಪಡೆದಿದ್ದಾರೆ. ನಾಯಕ ಅಂದರೆ ಬಿಲ್ಡಪ್ಪು ಬಡಿದಾಟ ಅಂದುಕೊಂಡರೆ ಇಲ್ಲಿನ ಹೀರೋ ಅದೆಲ್ಲಕ್ಕಿಂತ ಭಿನ್ನ. ಯಾಕೆಂದರೆ, ಕರ್ಣ ಇಲ್ಲಿ ರೈತನಾಗಿ ನಟಿಸಿದ್ದಾರೆ. ನಾಯಕಿ ಐಶ್ವರ್ಯಾ ರಾವ್ ಕೂಲಿಕಾರ ಹೆಣ್ಣುಮಗಳಾಗಿ ಅವರಿಗೆ ಸಾಥ್ ಕೊಟ್ಟಿದ್ದಾರೆ.

ಇದು ರೈತರ ಕಷ್ಟ ಸುಖಗಳಿಗೆ ಕಣ್ಣಾಗುವಂಥಾ ವಿಭಿನ್ನ ಕಥಾ ಹಂದರ ಹೊಂದಿರೋ ಚಿತ್ರ. ವಿ ಮನೋಹರ್ ಒಂದಷ್ಟು ಕಾಲ ಸಂಗೀತ ನಿರ್ದೇಶನದಿಂದ ದೂರ ಉಳಿದುಕೊಂಡಿದ್ದರೂ ಕೂಡಾ ಈ ಕಥೆಯ ಸೊಗಸಿನ ಕಾರಣದಿಂದಲೇ ಒಪ್ಪಿಕೊಂಡಿದ್ದರಂತೆ. ನಂತರ ಈ ಕಥೆಗೆ ತಕ್ಕುದಾದ ಸಂಗೀತದ ಪಟ್ಟುಗಳನ್ನು ಹಾಕಿ ಹಾಡುಗಳನ್ನು ರೂಪಿಸಿದ್ದಾರೆ. ವಿಭಿನ್ನ ಸೌಂಡಿಂಗ್ ಹೊಂದಿರೋ ಈ ಹಾಡುಗಳೆಲ್ಲ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಈ ಎಲ್ಲ ಹಾಡುಗಳೂ ಕೂಡಾ ಮಾಧುರ್ಯದಿಂದಲೇ ಮೋಡಿ ಮಾಡಿವೆ. ಹೀಗೆ ಎಲ್ಲ ಥರದಲ್ಲಿಯೂ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಈ ಚಿತ್ರ ಇದೇ ತಿಂಗಳ 22ರಂದು ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next