Advertisement

ಕೋವಿಡ್ ದಿಂದ ಕಳೆಗುಂದಿದ ರಂಜಾನ್‌ ಸಂಭ್ರಮ

06:46 AM May 24, 2020 | mahesh |

ಹುಬ್ಬಳ್ಳಿ: ಕೋವಿಡ್ ಆತಂಕ, ಲಾಕ್‌ಡೌನ್‌ ಈ ಬಾರಿಯ ರಂಜಾನ್‌ ಸಂಭ್ರಮದ ಮೇಲೆ ಕರಿಛಾಯೆ ಮೂಡಿಸಿದಂತಾಗಿದ್ದು, ವ್ಯಾಪಾರ-ವಹಿವಾಟು ಕಳೆಗುಂದಿದಂತಾಗಿದೆ. ಪ್ರತಿ ವರ್ಷ ಒಂದು ತಿಂಗಳ ಕಾಲ ಉಪವಾಸ, ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ವಿಜೃಂಭಣೆಯಿಂದ ಆಚರಿಸುತ್ತಿದ್ದ ರಂಜಾನ್‌ ಹಬ್ಬ ಈ ಬಾರಿ ಸದ್ದಿಲ್ಲದೇ ನಡೆಯುವಂತಾಗಿದೆ. ರಂಜಾನ್‌ ವೇಳೆಗೆ ಪ್ರತಿವರ್ಷ ಜನರಿಂದ ತುಂಬಿರುತ್ತಿದ್ದ ಇಲ್ಲಿನ ಶಹಾ ಬಜಾರ್‌ ಭಣಗುಡುತ್ತಿದೆ. ದುರ್ಗದ ಬಯಲು ಇನ್ನಿತರ ಕಡೆಯಲ್ಲಿ ಜನರೇ ಇಲ್ಲದಂತಾಗಿದೆ.

Advertisement

ಝಗಮಗವೇ ಇಲ್ಲ: ಪ್ರತಿ ವರ್ಷ ರಂಜಾನ್‌ ಹಬ್ಬದ ಸಮಯದಲ್ಲಿ ವಿದ್ಯುತ್‌ ಅಲಂಕಾರ ಹಾಗೂ ಜನಜಂಗುಳಿಯಿಂದ ಕೂಡಿರುತ್ತಿದ್ದ ಶಹಾ ಬಜಾರ್‌ ಮಾರುಕಟ್ಟೆ ಬಿಕೋ ಎನ್ನುತ್ತಿದೆ. ಹುಬ್ಬಳ್ಳಿ ಮಾರುಕಟ್ಟೆ ಇದೀಗ ಕೊರೊನಾ ವೈರಸ್‌ನಿಂದ ನೆಲಕಚ್ಚಿದೆ. ರಂಜಾನ್‌ ಸಮಯದಲ್ಲಿ ಎಲ್ಲ ಬಟ್ಟೆ ಅಂಗಡಿಗಳು ಜನರಿಂದ
ತುಂಬಿರುತ್ತಿದ್ದವು. ಆದರೆ ಈ ಬಾರಿ ಅಂತಹ ಯಾವುದೇ ಸನ್ನಿವೇಶ ಕಂಡು ಬರುತ್ತಿಲ್ಲ ರಂಜಾನ್‌ ಹಬ್ಬದ ನಿಮಿತ್ತ ಖರೀದಿಗೆಂದು ಗದಗ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಯಲ್ಲಾಪುರ, ಬೆಳಗಾವಿ ಇನ್ನಿತರ ಕಡೆಯಿಂದ ಜನರು ಹುಬ್ಬಳ್ಳಿ ಮಾರುಕಟ್ಟೆಗೆ ಬರುತ್ತಿದ್ದರು. ಈ ಬಾರಿ ಅದು ಇಲ್ಲವಾಗಿದೆ.

ದುರ್ಗದ ಬಯಲಿನಲ್ಲಿ ಖರೀದಿ: ರಂಜಾನ್‌ ಹಬ್ಬದ ನಿಮಿತ್ತ ಇಲ್ಲಿನ ದುರ್ಗದ ಬಯಲು ವೃತ್ತದ ಬಳಿ ಹಬ್ಬದ ಮುನ್ನಾ ದಿನವಾದ ಶನಿವಾರ ಭರ್ಜರಿ ವ್ಯಾಪಾರ ನಡೆಸಲಾಗುತ್ತಿತ್ತು. ಹಬ್ಬದ ಆಚರಣೆಗೆ ಬೇಕಾಗುವ ದಿನಸಿ, ಹಾಗೂ ಸಿಹಿ ಪದಾರ್ಥಗಳ ಖರೀದಿ ಜೋರಾಗಿ ನಡೆಯುತ್ತಿತ್ತು.

200ಕ್ಕೂ ಹೆಚ್ಚು ಮಳಿಗೆಗಳಿಗೆ ಬೀಗ: ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ರೋಗ ಭೀತಿಯಿಂದ ಶಹಾ ಬಜಾರ್‌ ಮಾರುಕಟ್ಟೆಯನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಕೆಲವೊಂದು ಕಡೆ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು,ಮುಖಕ್ಕೆ ಮಾಸ್ಕ್ ಧರಿಸುವುದಾಗಲಿ, ಸಾಮಾಜಿಕ ಅಂತರ ಇಲ್ಲದಿರುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next