Advertisement

BJPಯಿಂದ ಆಹ್ವಾನವಿದೆ ಎಂಬ ರಮ್ಯಾ ಹೇಳಿಕೆ ಸುಳ್ಳು: ಆರ್‌.ಅಶೋಕ್‌

08:38 PM Apr 23, 2023 | Team Udayavani |

ಬೆಂಗಳೂರು: ರಮ್ಯಾ ಅವರನ್ನು ನಮ್ಮ ಪಕ್ಷಕ್ಕೆ ಕರೆಯುವಷ್ಟು ನಾವು ಬರಗೆಟ್ಟಿಲ್ಲ. ನಮ್ಮ ಪಕ್ಷ ಅಷ್ಟು ಕೆಳಕ್ಕೆ ಹೋಗಿಲ್ಲ. ನಾವು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಂತವರಿಗೆ ಟಿಕೆಟ್‌ ಕೊಟ್ಟಿಲ್ಲ. ಅಂತಹದ್ದರಲ್ಲಿ ರಮ್ಯಾರನ್ನು ಕರೆಯುತ್ತೇವಾ? ಅದೆಲ್ಲಾ ಸುಳ್ಳು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ರಮ್ಯಾ ಹೀರೋ ಆಗಲು ಪ್ರಯತ್ನ ಮಾಡುತ್ತಿದ್ದಾರೆ. ರಮ್ಯಾ ಮೂಲ ಕಾಂಗ್ರೆಸಿಗರು. ಅವರು ಕಾಂಗ್ರೆಸ್‌ನಲ್ಲಿ ಮಾಧ್ಯಮಗಳನ್ನು ನಿಯಂತ್ರಣ ಮಾಡುವ ಕೆಲಸ ಮಾಡುತ್ತಿದ್ದರು. ಈಗ ಚುನಾವಣೆ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರಚಾರಕ್ಕಾಗಿ ರಮ್ಯಾ ಹೀಗೆ ಹೇಳಿಕೆ ನೀಡಿದ್ದಾರೆ. ಅವರು ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ. ಅವರು ಅಲ್ಲೇ ಇರಲಿ. ಅದೇ ಒಳ್ಳೆಯದು ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next