Advertisement

ಶ್ರೀಕೃಷ್ಣಮಠದ ಭೋಜನಶಾಲೆಗೆ ರಾಂಪ್

07:40 AM Jul 29, 2017 | Team Udayavani |

ಉಡುಪಿ: ಶ್ರೀಕೃಷ್ಣಮಠದ ಭೋಜನಶಾಲೆಯ ಉಪ್ಪರಿಗೆಗೆ ಮೆಟ್ಟಿಲು ಹತ್ತಿ ಹೋಗಬೇಕಾಗಿತ್ತು. ಇದು ಕೆಲವರಿಗೆ ಕಷ್ಟವಾದ ಕಾರಣ ಪರ್ಯಾಯ ಶ್ರೀಪೇಜಾವರ ಮಠದ ವತಿಯಿಂದ ನೂತನವಾಗಿ ರಾಂಪ್ ನಿರ್ಮಿಸಲಾಗಿದೆ. ರಾಂಪ್ನ್ನು ಶ್ರೀಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಶುಕ್ರವಾರ ಉದ್ಘಾಟಿಸಿದರು. ಪರ್ಯಾಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. 

Advertisement

ರಾಂಪ್ನ್ನು ಸುಮಾರು 9 ಲ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ವೃದ್ಧರು, ಕಾಲು ನೋವು ಇರುವವರು, ವೀಲ್‌ ಚೆಯರ್‌ನಲ್ಲಿ ಹೋಗುವವರಿಗೆ ರಾಂಪ್ ನಿರ್ಮಾಣ ಅನುಕೂಲವಾಗಿದೆ. ರಾಂಪ್ ಒಂದು ಸಾಲಿನಲ್ಲಿ ಹೋಗುವುದು, ಇನ್ನೊಂದು ಸಾಲಿನಲ್ಲಿ ಬರುವುದು ಮಾಡಲು ಸಾಧ್ಯವೆ ಎಂದು ಚಿಂತನೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next