Advertisement

Ramnagar: ಲಂಚ ಪಡೆಯುತ್ತಿದ್ದ ಸರ್ವೇ ಅಧಿಕಾರಿ ಲೋಕಾಯುಕ್ತ ಬಲೆಗೆ

10:39 PM Dec 04, 2023 | Team Udayavani |

ರಾಮನಗರ: ಸರ್ವೇ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸೋಮವಾರ ನಡೆದಿದೆ.

Advertisement

ಮಾಗಡಿ ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ 20 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಸರ್ವೇ ಅಧಿಕಾರಿ ಸಂತೋಷ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಜಮೀನು ಸರ್ವೆಯಲ್ಲಿ ತಮ್ಮ ಪರವಾಗಿ ಮಾಡಿಕೊಡುವಂತೆ ಹೇಳಿದ್ದ ವ್ಯಕ್ತಿ ಪರವಾಗಿ ಸರ್ವೇ ಮಾಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಮೊದಲು 5 ಸಾವಿರ ಲಂಚ ಪಡೆದಿದ್ದರು.

ಇಂದು ಉಳಿದ 20 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next