Advertisement

ರಾಮನಗರ : 3 ಬಾಲಕಿಯರೊಂದಿಗೆ ಮಹಿಳೆ ನೀರು ಪಾಲು 

03:36 PM Nov 18, 2017 | |

ರಾಮನಗರ: ಜಿಲ್ಲೆಯ ಚೆನ್ನಪಟ್ಟಣದ ವಿರುಪಾಕ್ಷಿಪುರದಲ್ಲಿ ರಾಮಯ್ಯನ ಕೆರೆಯಲ್ಲಿ ಬಟ್ಟೆ ತೊಳೆಯಲೆಂದು ತೆರಳಿದ್ದ ಮೂವರು ಬಾಲಕಿಯರು  ಮತ್ತು ಮಹಿಳೆ ನೀರು ಪಾಲಾದ ದಾರುಣ ಘಟನೆ ಶನಿವಾರ ನಡೆದಿದೆ. 

Advertisement

ವರದಿಯಾದಂತೆ ನಾಲ್ವರೂ ಕಾಲು ಜಾರಿ  ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದ್ದು ಮೃತ ದುರ್‌ದೈವಿಗಳು ವಿರುಪಾಕ್ಷಿ ಪುರದ ಮಾಲತಿ( 35 ) ಮಗಳಾದ ಪೂರ್ಣಿಮಾ( 15),ಪಕ್ಷದ ಮನೆಯ ಅನುಶ್ರಿ (10) ನಮೃತಾ (8) ಎಂದು ಗುರುತಿಸಲಾಗಿದೆ. ನಾಲ್ವರ ಶವಗಳನ್ನು ಪೊಲೀಸರ ಸಮ್ಮುಖದಲ್ಲಿ ಮೇಲಕ್ಕೆತ್ತಲಾಗಿದೆ. 

ಮೃತರ ಕುಟುಂಬ ಸದಸ್ಯರ ರೋದನಮುಗಿಲು ಮುಟ್ಟಿದೆ. ಅಕ್ಕೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next