Advertisement

New delhi; ಬಿಲಿಯನೇರ್ ಫಾರ್ಮರ್ ಪ್ರಶಸ್ತಿ ಸ್ವೀಕರಿಸಿದ ತೆಕ್ಕಟ್ಟೆಯ ರಮೇಶ್ ನಾಯಕ್

04:05 PM Dec 07, 2023 | Team Udayavani |

ತೆಕ್ಕಟ್ಟೆ: ವ್ಯವಸಾಯ ಮತ್ತು ವ್ಯವಸಾಯ ಆಧಾರಿತ ಉದ್ಯಮವನ್ನು ಮಾಡಿ ಮಿಲಿಯನ್ ಹಾಗೂ ಬಿಲಿಯನ್ ವಹಿವಾಟು ಹೊಂದಿದ ರೈತರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾ ಎಂಬ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕು ತೆಕ್ಕಟ್ಟೆಯ ಪ್ರತಿಪರ ರೈತ ಟಿ. ರಮೇಶ್ ನಾಯಕ್ ಇವರು ಬಿಲಿಯನೇರ್ ಫಾರ್ಮರ್ ಎಂಬ ಪ್ರಶಸ್ತಿ ಸ್ವೀಕರಿಸಿದರು.

Advertisement

ಗುಜರಾತ್ ರಾಜ್ಯದ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ರಮೇಶ್ ನಾಯಕ್ ಅವರಿಗೆ ದೆಹಲಿಯ ಮೇಳ ಗ್ರೌಂಡ್ ಐಎಆರ್ ಐನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಆಚಾರ್ಯ ದೇವವ್ರತ್ ಅವರು, ಕೃಷಿ ಎಂದರೆ ಕೇವಲವಾಗಿ ಕಾಣುವ ಈ ದಿನಗಳಲ್ಲಿ ದೇಶದಾದ್ಯಂತ ಇರುವ ಲಕ್ಷ ಕೋಟಿಗಳಲ್ಲಿ ಕೃಷಿ ಸಂಬಂಧಿತ ವ್ಯವಸಾಯ ನಡೆಸುವವರನ್ನು ಗುರುತಿಸುವುದರಿಂದ ಇತರ  ಕೃಷಿಕರಿಗೆ ಹುಮ್ಮಸ್ಸು ಬರುತ್ತದೆ. ಮತ್ತು ಕೃಷಿಕರು ಈ ರೀತಿಯ ಗೌರವವನ್ನು ಪಡೆಯಲು ನಿಜವಾಗಿಯೂ ಅರ್ಹರು ಎಂದು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next