Advertisement

ರಮೇಶ್‌ ಜಾರಕಿಹೊಳಿ “ಕೊಠಡಿ ಪಟ್ಟು’!

10:53 PM Feb 06, 2020 | Lakshmi GovindaRaj |

ಬೆಂಗಳೂರು: ಸಂಪುಟ ಸೇರ್ಪಡೆಯಾದ ನೂತನ ಸಚಿವರಿಗೆ ವಿಧಾನಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ. ಡಿ.ಕೆ.ಶಿವಕುಮಾರ್‌ ಹಿಂದೆ ಸಚಿವರಾಗಿದ್ದಾಗ ಕಾರ್ಯನಿರ್ವಹಿಸಿದ್ದ ಮೂರನೇ ಮಹಡಿಯ 336 ಸಂಖ್ಯೆಯ ಕೊಠಡಿಯೇ ಬೇಕು ಎಂದು ಪಟ್ಟು ಹಿಡಿದಿದ್ದ ರಮೇಶ್‌ ಜಾರಕಿಹೊಳಿಗೆ ಆ ಕೊಠಡಿ ಸಿಕ್ಕಿಲ್ಲ.

Advertisement

ಬದಲಿಗೆ ವಿಧಾನಸೌಧಲ್ಲೇ 342-342 ಎ ಕೊಠಡಿ ಸಿಕ್ಕಿದೆ. ಎಸ್‌.ಟಿ.ಸೋಮಶೇಖರ್‌, ಆನಂದ್‌ಸಿಂಗ್‌, ಬಿ.ಸಿ.ಪಾಟೀಲ್‌, ನಾರಾಯಣಗೌಡ ಅವರಿಗೆ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದ್ದು, ಉಳಿದವರಿಗೆ ವಿಧಾನಸೌಧದಲ್ಲಿ ಹಂಚಿಕೆ ಮಾಡಲಾಗಿದೆ.

ವಿಧಾನ ಸೌಧದಲ್ಲಿ ರಮೇಶ್‌ ಜಾರಕಿಹೊಳಿ-342-342 ಎ, ಡಾ.ಕೆ.ಸುಧಾಕರ್‌-339-339ಎ, ಬೈರತಿ ಬಸವರಾಜು-337-337ಎ, ಶಿವರಾಮ್‌ ಹೆಬ್ಬಾರ್‌-258-257ಎ, ಕೆ.ಗೋಪಾಲಯ್ಯ- 252-253 ಎ, ಶ್ರೀಮಂತ ಪಾಟೀಲ್‌-310-301 ಎ, ಕೊಠಡಿ ಹಂಚಿಕೆಯಾಗಿದ್ದರೆ, ಉಳಿದಂತೆ ವಿಕಾಸಸೌಧದಲ್ಲಿ ಎಸ್‌.ಟಿ.ಸೋಮಶೇಖರ್‌-38-39, ಆನಂದ್‌ಸಿಂಗ್‌-36-37, ಬಿ.ಸಿ.ಪಾಟೀಲ್‌-406, 407, ನಾರಾಯಣ ಗೌಡ-234-235 ನಂಬರಿನ ಕೊಠಡಿ ಹಂಚಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next