Advertisement

ರಮೇಶ, ಅಂಬಿರಾವ್‌ ಸೇರಿ ಗೋಕಾಕ ಲೂಟಿ: ಸತೀಶ

10:57 PM Sep 23, 2019 | Team Udayavani |

ಬೆಳಗಾವಿ: ನನ್ನ ಬಗ್ಗೆ ಆಧಾರ ರಹಿತ ಆರೋಪಗಳನ್ನು ಮಾಡುವ ಬದಲು ನನ್ನ ಹಗರಣಗಳ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಶಾಸಕ ಸತೀಶ ಜಾರಕಿಹೊಳಿ ತಮ್ಮ ಸಹೋದರ ರಮೇಶಗೆ ನೇರ ಸವಾಲು ಹಾಕಿದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗ ಮನೆತನಕ್ಕಿಂತ ಪಕ್ಷ ಮುಖ್ಯವಾಗಿದೆ. ರಮೇಶ ಜಾರಕಿಹೊಳಿ ಹಾಗೂ ಅವರ ಅಳಿಯ ಸೇರಿಕೊಂಡು ಗೋಕಾಕ ಲೂಟಿ ಮಾಡಿದ್ದಾರೆ.

Advertisement

ಇದಕ್ಕಿಂತ ದೊಡ್ಡ ಹಗರಣ ಬೇರೆ ಯಾವುದೂ ಇಲ್ಲ. ಏನೂ ಗೊತ್ತಿಲ್ಲದವರಂತೆ ನಟಿಸುವ ರಮೇಶ ಜಾರಕಿಹೊಳಿ ತಾವು ಯಾವ ವಸ್ತು ಕಳೆದುಕೊಂಡಿದ್ದೇನೆಂದು ಹೇಳಿದರೆ ಒಳ್ಳೆಯದು. ಇದರಿಂದ ನನ್ನ ಬಾಯಿ ಕೆಡಿಸಿಕೊಳ್ಳುವದು ತಪ್ಪುತ್ತದೆ. ಗೋಕಾಕದಲ್ಲಿ ನಾನು ಮಾಡುವ ಸಮಾವೇಶದಲ್ಲಿ ಬರೀ ವಸ್ತುವಿನ ಬಗ್ಗೆ ಹೇಳುವುದಲ್ಲ. ಬೇರೆ ಅಭಿವೃದ್ಧಿ ವಿಷಯಗಳ ಬಗ್ಗೆಯೂ ಚರ್ಚೆ ಮಾಡುತ್ತೇನೆ.

ಕಳೆದ 20 ವರ್ಷಗಳಲ್ಲಿ ಗೋಕಾಕ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತೇನೆ ಎಂದರು. ರಮೇಶ ಅವರ ಅಳಿಯ ಅಂಬಿರಾವ್‌ ಈಗ ನಿಯಂತ್ರಣಕ್ಕೆ ಸಿಗದ ವ್ಯಕ್ತಿಯಾಗಿದ್ದಾರೆ. ಅಂಬಿರಾವ್‌ ಈಗ ಅದಾನಿ ಮತ್ತು ಅಂಬಾನಿಯಾಗಿದ್ದಾರೆ. ರಮೇಶ ಒಂದು ರೀತಿ ಹಿಟ್‌ ಆ್ಯಂಡ್‌ ರನ್‌ ರಾಜಕಾರಣಿ. ಒಂದೊಂದು ಹೇಳಿಕೆಗೂ ತಾಳಮೇಳ ಇರುವುದಿಲ್ಲ. ಚುನಾವಣೆ ಮತ್ತು ಲಾಭಕ್ಕಾಗಿ ಏನೇನೋ ಹೇಳುತ್ತಾನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next