Advertisement

ನಾನು ಶಾಸಕನಾಗಿದ್ದರೂ ಸಚಿವನಾಗಬೇಕೆಂಬ ಭ್ರಮೆ ಇಲ್ಲ: ರಾಮದಾಸ್‌

03:44 PM Jan 24, 2021 | Team Udayavani |

ಮೈಸೂರು: ಸಚಿವ ಸ್ಥಾನ ಸಿಗದಿದ್ದಕ್ಕೇ ಇತ್ತೀಚೆಗೆ ತಾನೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಮೈಸೂರಿನ ಕೆ.ಆರ್‌. ಕ್ಷೇತ್ರದ
ಬಿಜೆಪಿ ಶಾಸಕ ಎಸ್‌.ಎ. ರಾಮದಾಸ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಗುಣಗಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.

Advertisement

ಮೈಸೂರಿನ ಜೆ.ಪಿ. ನಗರ ಅಕ್ಕಮಹಾದೇವಿ ರಸ್ತೆಯಲ್ಲಿ ಶನಿವಾರ ನಡೆದ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಅಪರೂಪದ ಮುಖ್ಯಮಂತ್ರಿ ಎಂದು ಹಾಡಿ ಹೊಗಳಿದರು. ರಾಜಕಾರಣಿಗಳಾದಂತಹವರು ಯಾವುದಕ್ಕೂ ಹೆದರಬೇಡಿ ಎಂಬುದನ್ನು ಅಕ್ಕಮಹಾದೇವಿ 800 ವರ್ಷಗಳ ಹಿಂದೆಯೇ ಹೇಳಿದ್ದಾರೆ. ನನ್ನಂತಹವರಿಗೆ ಕೂಡ ಅಧಿಕಾರಿರಾದ ಆಸೆ, ಭ್ರಮೆ ಇರಬಾರದು ಎಂದು ಅಕ್ಕ ಹೇಳಿದ್ದಾರೆ. ನಾನು ಶಾಸಕನಾಗಿದ್ದರೂ ಸಚಿವನಾಗಬೇಕೆಂಬ ಭ್ರಮೆ ಇಲ್ಲ, ಆಸೆ ಇಲ್ಲ. ಇದಕ್ಕೆ ಅಕ್ಕಮಹಾದೇವಿ ಸಂದೇಶ ವಿಚಾರಧಾರೆಗಳು ಕಾರಣರಾಗಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next