Advertisement

ಪ್ರತಿರುದ್ರ ಭಜನ ರಾಮಾಯಣ ಕುಂಕುಮಾರ್ಚನೆ

07:38 PM Apr 07, 2019 | sudhir |

ನೀರ್ಚಾಲು: ಶ್ರೀಮಜ್ಜಗದ್ಗುರು ಶಂಕರಾ ಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ಅನುಗ್ರಹ ಆಶೀರ್ವಾದಗಳೊಂದಿಗೆ ಮಂಗಳೂರು ಹೋಬಳಿಯ ಮುಳೇÛರಿಯಾ ಮಂಡಲಾಂತರ್ಗತ ಪೆರಡಾಲ ವಲಯದ ನೀರ್ಚಾಲು ಸಮೀಪದ ಏಣಿಯರ್ಪಿನಲ್ಲಿರುವ ಕಿಳಿಂಗಾರು ವೇ.ಮೂ.ಬಾಲಕೃಷ್ಣ ಪ್ರಸಾದ ಅವರ ನಿವಾಸ ಈಶಾವಾಸ್ಯಂನಲ್ಲಿ ಶ್ರೀ ಮಠ ರûಾತ್ಮಕವಾದ ಧಾರ್ಮಿಕ ಕಾರ್ಯಕ್ರಮವು ಸಂಪನ್ನವಾಯಿತು.

Advertisement

ಮಹಾ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಧ್ವಜಾರೋಹಣ ಮಾಡಿದರು. ಶಂಖನಾದ ಗುರುವಂದನೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು.
ಮಂಗಳೂರು ಉಪ್ಪಿನಂಗಡಿ ಮುಳೇÛರಿಯಾ ಹವ್ಯಕ ಮಂಡಲಗಳಿಂದ ಬಂದುಸೇರಿದ ರುದ್ರಾ ಧ್ಯಾಯಿಗಳಿಂದ ಪ್ರದೋಷ ಪ್ರತಿರುದ್ರ ಪಠಣವು ಜರಗಿತು.

ಮಾತೃ ವಿಭಾಗದವರಿಂದ ಭಜನ ರಾಮಾಯಣ ಮತ್ತು ಕುಂಕುಮಾರ್ಚನೆಯು ಜರಗಿತು.

ಪ್ರದೋಷ ಕಾಲದಲ್ಲಿ ರುದ್ರಾಧ್ಯಾಯಿಗಳ ಸಹಯೋಗದಲ್ಲಿ ಮನೆಯವರ ನೇತೃತ್ವದಲ್ಲಿ ಶ್ರೀ ರುದ್ರಕಲ್ಪದಲ್ಲಿ ವಿಧಿಸಿರುವಂತೆ ವಿವಿಧ ದ್ರವ್ಯಗಳಿಂದ ಪ್ರದೋಷ ರುದ್ರಾಭಿಷೇಕ ಪೂರ್ವಕ ಶಂಕರನಾರಾಯಣ ಪೂಜೆಯು ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next