Advertisement

ಸದನದಲ್ಲಿ ರಾಮಾಯಣ ಗದ್ದಲ

06:37 AM Feb 12, 2019 | Team Udayavani |

ಬೆಂಗಳೂರು: ಆಪರೇಷನ್‌ ಆಡಿಯೋ ಗದ್ದಲ ಸದನದಲ್ಲಿ ರಾಮಾಯಣ ನೆನಪಿಸಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣಬೈರೇಗೌಡ ಸದನದಲ್ಲಿ ರಾಮಾಯಣ ಉಲ್ಲೇಖೀಸಿ, “ಹಾದಿಯಲ್ಲಿ ಹೋಗುವ ವ್ಯಕ್ತಿ, ಸೀತೆಯ ಬಗ್ಗೆ ಮಾತನಾಡಿದಾಗ ರಾಮ ಅದನ್ನು ಗಂಭೀರವಾಗಿ ಪರಿಗಣಿಸಿ ಸೀತೆಗೆ ಶಿಕ್ಷೆ ಕೊಡುತ್ತಾನೆ’ ಎಂದರು.

Advertisement

ಆಗ ಬಿಜೆಪಿ ಸದಸ್ಯರೊಬ್ಬರು, “ರಾಮಾಯಣ ಕಾಲ್ಪನಿಕ ಕಥೆ’ ಎಂದಾಗ ಇದಕ್ಕೆ ಕೃಷ್ಣ ಬೈರೆಗೌಡ ಅಲ್ಲಗಳೆದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು, “ರಾಮಾಯಣ ಕಾಲ್ಪನಿಕ ಕಥೆ ಎಂದು ಕಾಂಗ್ರೆಸ್‌ ಪಕ್ಷವೇ ಸುಪ್ರೀ ಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿದೆ’ ಎಂದಾಗ ಕೃಷ್ಣ ಬೈರೇಗೌಡ ತಮ್ಮ ಹೇಳಿಕೆ ಹಿಂಪಡೆದರು.

ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಮಾತನಾಡಿ, “ಸೀತೆ ಮೇಲೆ ಆರೋಪ ಬಂದಾಗ ಅವಳು ಅಗ್ನಿ ಸ್ಪರ್ಶ ಮಾಡಿದ್ದಳು. ಈಗ ನಿಮ್ಮ ಮೇಲೆ ಆರೋಪ ಬಂದ ಕೂಡಲೇ ನೀವೇಕೆ ಶಿಕ್ಷೆಗೊಳಗಾಗುತ್ತೀರಿ? ನೀವು ಸೀತೆ ಆಗಬೇಡಿ ರಾಮನಾಗಿ’ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ಗೆ ಹೇಳಿದರು.

ಕೃಷ್ಣಬೈರೇಗೌಡ ಮತ್ತೆ ರಾಮಾಯಣ ಪ್ರಸ್ತಾಪಿಸಲು ಮುಂದಾದಾಗ ತಡೆದ ಸ್ಪೀಕರ್‌ ರಮೇಶ್‌ ಕುಮಾರ್‌, “ಈಗ ರಮೇಶ್‌ ಕುಮಾರ್‌ ರಾಮಾಯಣ ಮುಗಿಸಿ, ನಂತರ ಆ ರಾಮಾಯಣ ನೋಡೋಣ’ ಎಂದು ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next