Advertisement

Lucknow: ರಾಮನ ಕುಲದೇವತೆ ದೇವ್‌ಕಾಳಿ ದೇವಳಕ್ಕೆ ಜೀವಕಳೆ: ಭಕ್ತರ ದಂಡು

08:58 PM Jan 28, 2024 | Team Udayavani |

ಲಕ್ನೋ: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಯ ಬಳಿಕ ಶ್ರೀರಾಮನಿಗೆ ಸಂಬಂಧಿಸಿದ ಹಲವು ದೇಗುಲಗಳಿಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಇದೀಗ ಶ್ರೀರಾಮನ ಕುಲದೇವತೆ ಎಂಬ ಪ್ರತೀತಿ ಹೊಂದಿರುವ ಅಯೋಧ್ಯೆಯ ಬರ್ಹಿ ದೇವ್‌ಕಾಳಿ ದೇಗುಲಕ್ಕೆ ಭಕ್ತರ ದಂಡು ಹರಿದುಬರುತ್ತಿದ್ದು, ಈ ಪ್ರಾಚೀನ ದೇಗುಲಕ್ಕೆ ಮತ್ತೆ ಜೀವಕಳೆ ಬಂದಂತಾಗಿದೆ.

Advertisement

ತ್ರಿದೇವಿಯರಾದ ಮಹಾಕಾಳಿ, ಮಹಾಲಕ್ಷ್ಮೀ, ಮಹಾ ಸರಸ್ವತಿಯ ರೂಪವಾಗಿರುವ ದೇವ್‌ಕಾಳಿಯನ್ನು ಮಹಾರಾಜ ರಘು ಪ್ರತಿಷ್ಠಾಪಿಸಿ ಯಾಗ ನೆರವೇರಿಸಿದನು. ಆ ಬಳಿಕವೇ ಆತನಿಗೆ ಯುದ್ಧದಲ್ಲಿ ಜಯ ಪ್ರಾಪ್ತಿಯಾಯಿತು. ಹೀಗಾಗಿ ರಘುವಂಶಸ್ಥರು ದೇವ್‌ಕಾಳಿಯನ್ನು ಕುಲದೇವತೆ ಎಂದು ಪೂಜಿಸುತ್ತಾ ಬರುತ್ತಿದ್ದಾರೆ ಎನ್ನುವ ಪ್ರತೀತಿ ಇದೆ. ಶ್ರೀರಾಮನ ಜನನದ ಬಳಿಕ ರಾಣಿ ಕೌಸಲ್ಯಾದೇವಿ ಇಡೀ ಪರಿವಾರದೊಂದಿಗೆ ಈ ದೇಗುಲಕ್ಕೆ ಬಂದು ಪೂಜೆ ಸಲ್ಲಿಸಿದ್ದರು ಎಂದೂ ಹೇಳಲಾಗುತ್ತದೆ. ರಾಮ ಮಂದಿರ ಉದ್ಘಾಟನೆಗೂ ಮುಂಚೆ ದಿನಕ್ಕೆ 50-60 ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದರು, ಈಗ ಈ ಸಂಖ್ಯೆ 500 ದಾಟಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ರಾಮ ಮಂದಿರಕ್ಕೆ ಬೆಳ್ಳಿ ಪೊರಕೆ ಉಡುಗೊರೆ
ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಅಖೀಲ ಭಾರತೀಯ ಮಂಗ್‌ ಸಮಾಜ್‌ನ ವತಿಯಿಂದ ಭಕ್ತಾದಿಗಳು 1.8 ಕೆಜಿ ತೂಕದ ಬೆಳ್ಳಿ ಪೊರಕೆಯನ್ನು ಉಡುಗೊರೆ ನೀಡಿದ್ದು, ಗರ್ಭಗುಡಿ ಸ್ವತ್ಛಗೊಳಿಸಲು ಈ ಪೊರಕೆ ಬಳಸುವಂತೆ ಮನವಿ ಮಾಡಿದ್ದಾರೆ. ಬೆಳ್ಳಿ ಪೊರೆಕೆಯನ್ನು ಹೂವಿನಿಂದ ಅಲಂಕರಿಸಿ, ತಲೆ ಮೇಲೆ ಹೊತ್ತುಕೊಂಡು ಭಕ್ತರು ಮೆರವಣಿಗೆ ನಡೆಸಿದ್ದು, ಬಳಿಕ ಅದನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next