Advertisement

ಬ್ರಹ್ಮಹತ್ಯಾ ದೋಷಕ್ಕೆ ಮುಕ್ತಿ ದೊರೆತ ಧಾಮ

10:29 PM Sep 20, 2019 | mahesh |

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಪುಣ್ಯಕ್ಷೇತ್ರ, ರಾಮನಾಥಪುರ. “ದಕ್ಷಿಣದ ಕಾಶಿ’ ಅಂತಲೇ ಕರೆಯಲ್ಪಡುವ ಈ ಊರಿಗೆ ತ್ರೇತಾಯುಗದಲ್ಲಿ “ವಾಸವಾಪುರಿ’ ಎನ್ನಲಾಗುತ್ತಿತ್ತಂತೆ. ಬ್ರಾಹ್ಮಣನೂ ಆಗಿದ್ದ ರಾವಣನನ್ನು ಸಂಹರಿಸಿದ ನಂತರ ಶ್ರೀರಾಮ, ಬ್ರಹ್ಮಹತ್ಯಾ ದೋಷ ಪರಿಹರಿಸಿಕೊಳ್ಳಲು, ಇಲ್ಲಿಗೆ ಆಗಮಿಸುತ್ತಾನೆ. ಅಗಸ್ತ್ಯ ಋಷಿಗಳ ಸಲಹೆಯ ಮೇರೆಗೆ, ವಿಹಿ° ಪುಷ್ಕರಣಿಯಲ್ಲಿ ಉದ್ಭವ ಶಿವಲಿಂಗವನ್ನು ಹುಡುಕಿ, ಪೂಜಿಸಿ, ಬ್ರಹ್ಮಹತ್ಯಾ ದೋಷದಿಂದ ಮುಕ್ತಿ ಪಡೆಯುತ್ತಾನೆ ಎನ್ನುವುದು ಪುರಾಣ ಕತೆ. ಅಲ್ಲಿಂದ “ವಾಸವಾಪುರಿ’ಯು ರಾಮನಾಥ ಪುರವಾಗಿ ಬದಲಾಯಿತು ಎನ್ನಲಾಗುತ್ತದೆ. ಅದಕ್ಕೂ ಮುಂಚೆಯೂ ಶ್ರೀರಾಮ, ವಾನರ ಸೇನೆಯೊಂದಿಗೆ ಇಲ್ಲಿಗೆ ಬಂದಿದ್ದನೆಂಬ ಮಾತುಗಳೂ ಇವೆ.

Advertisement

ಗಾಯತ್ರಿ ಚಂದ್ರಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next