Advertisement

Ramanagar; ಕೆಲಸಕ್ಕೆ ಗೈರಾದ ಕಾರಣಕ್ಕೆ ಯುವಕನಿಗೆ ಜೀತದಾಳು ಶಿಕ್ಷೆ; ಪೊಲೀಸ್ ದಾಳಿ

02:18 PM Dec 26, 2023 | Team Udayavani |

ರಾಮನಗರ: ಕೆಲಸಕ್ಕೆ ಗೈರು ಕಾರಣ ಯುವಕನಿಗೆ ಜೀತದಾಳು ಶಿಕ್ಷೆ ನೀಡಿದ್ದ ಸ್ಟೀಲ್ ಫ್ಯಾಕ್ಟರಿ ಮೇಲೆ ಪೊಲೀಸರು ದಾಳಿ ಮಾಡಿ ಯುವಕನ ರಕ್ಷಣೆ ಮಾಡಿದ ರಾಮನಗರದಲ್ಲಿ ನಡೆದಿದೆ.

Advertisement

ಮೊಹಮ್ಮದ್ ವಸೀಂ (24)‌ ಎಂ ಯುವಕನನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಸೋಮವಾರ ಸಂಜೆ ವೇಳೆ ದಾಳಿ ಮಾಡಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ರಾಮನಗರದ ಮೆಹೆಬೂಬ್ ನಗರದಲ್ಲಿರುವ ಎಸ್ ಐ ಯು ಫ್ಯಾಕ್ಟರಿಯಲ್ಲಿ ಕಳೆದ ಐದು ತಿಂಗಳ ಹಿಂದಿನಿಂದ ಕೆಲಸ ಮಾಡುತ್ತಿದ್ದ. ಫ್ಯಾಕ್ಟರಿ ಮಾಲಿಕ ಸೈಯ್ಯದ್ ಇಸಾಮ್ ಬಳಿ ಮುಂಗಡವಾಗಿ ಅವನು ಒಂದು ಲಕ್ಷ ಐವತ್ತು ಸಾವಿರ ಹಣ ಪಡೆದಿದ್ದ. ಆದರೆ ಒಂದು ತಿಂಗಳ ಹಿಂದಿನಿಂದ ಕೆಲಸಕ್ಕೆ ಬಂದಿರಲಿಲ್ಲ

ವಸೀಂನನ್ನು ಕರೆದು ತಂದ ಇಸಾಮ್ ಫ್ಯಾಕ್ಟರಿಯಲ್ಲಿ ಕೂಡಿ ಹಾಕಿದ್ದ. ಕಳೆದ ಒಂಬತ್ತು ದಿನದಿಂದ ಸರಪಳಿಯಲ್ಲಿ ಕಟ್ಟಿ ಕೆಲಸ ಮಾಡಿಸುತ್ತಿದ್ದ. ವಸೀಂನ ಪರಿಸ್ಥಿತಿ ನೋಡಲಾಗದೆ ಸಹ ಕಾರ್ಮಿಕರು ಪೊಲೀಸರಿಗೆ ವಿಚಾರ ತಿಳಿಸಿದ್ದರು.

ತಹಸೀಲ್ದಾರ್ ಆದೇಶದ ಮೇರೆಗೆ ಪುರ ಪೊಲೀಸರು ದಾಳಿ ನಡೆಸಿದ್ದು, ಮಾಲಿಕ ಇಸಾಮ್ ಹಾಗೂ ಸುಪರ್ ವೈಸರ್ ಅಮ್ಜದ್ ಎಂಬಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

Advertisement

ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next