Advertisement

Ramanagara; ಚುನಾವಣೆಗೆ 50 ಲಕ್ಷ ರೂ. ಬೆಟ್ಟಿಂಗ್:ಹಣ ಕೊಡಲಾಗದೆ ವ್ಯಕ್ತಿ ಆತ್ಮಹತ್ಯೆ

06:17 PM Jun 10, 2024 | Team Udayavani |

ರಾಮನಗರ: ಬೆಟ್ಟಿಂಗ್ ಕಟ್ಟಿ ಸಾಲದ ಸುಳಿಗೆ ಸಿಲುಕಿದ ವ್ಯಕ್ತಿಯೊಬ್ಬ ನೇಣಿಗೆ ಶರಣಾದ ಘಟನೆ ತಾಲೂಕಿನ ಬಿಡದಿಯಲ್ಲಿ ನಡೆದಿದೆ.

Advertisement

ಕೆಂಚನಕುಪ್ಪೆ ನಿವಾಸಿ ಶಿವರಾಜು (44) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪರ 50 ಲಕ್ಷಕ್ಕೂ ಅಧಿಕ ಹಣವನ್ನ ಬೆಟ್ಟಿಂಗ್ ಕಟ್ಟಿದ್ದರು ಎಂದು ಹೇಳಲಾಗಿದೆ.

ಬೆಟ್ ಕಟ್ಟಿದ್ದ ಅಭ್ಯರ್ಥಿ ಸೋಲುತ್ತಿದ್ದಂತೆ ಬೆಟ್ಟಿಂಗ್ ಹಣ ಕೇಳಿದ್ದು, ಕೊಡಲು ದುಡ್ಡಿಲ್ಲದೇ ಮನನೊಂದು‌ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಬಿಡದಿ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಮೃತದೇಹ‌ ರವಾನಿಸಿದ್ದಾರೆ. ಬಿಡದಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next