Advertisement

ಕಾಡು ಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ವಿಫ‌ಲ

04:28 PM Jul 17, 2021 | Team Udayavani |

ರಾಮನಗರ: ಜಿಲ್ಲೆಯಲ್ಲಿ  ಕಾಡು ಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ವಿಫ ‌ಲವಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಕರ್ನಾಟಕ ರೈತ ಸಂಘಹಾಗೂ ಹಸಿರು ಸೇನೆಯ ಜಿಲ್ಲಾ ಘಟಕ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಅರಣ್ಯ ಇಲಾಖೆಯ ವಿರುದ್ಧ ಗುಡುಗಿದರು.

ಜುಲೈ 19ರಂದು ಪ್ರತಿಭಟನೆ: ಜಿಲ್ಲಾ ಘಟಕದಅಧ್ಯಕ್ಷ ಎಚ್‌.ಎನ್‌.ಚಂದ್ರಶೇಖರ್‌ ಮಾತನಾಡಿ,ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಲ್ಲಿಅರಣ್ಯ ಇಲಾಖೆಯ ವೈಫ‌ಲ್ಯ ಖಂಡಿಸಿ ಜುಲೈ19ರಂದು ಜಿಲ್ಲಾ ಅರಣ್ಯ ಅಧಿಕಾರಿಗಳ ಕಚೇರಿಆವರಣದಲ್ಲಿ ಅನಿರ್ಧಿಷ್ಟ ಕಾಲ ಧರಣಿ ಪ್ರತಿಭಟನೆಹಮ್ಮಿಕೊಳ್ಳಲಾಗಿದೆ.

ಪ್ರತಿಭಟನೆಯಲ್ಲಿ ತಮ್ಮ ಸಂಘಟನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌,ಉಪಾಧ್ಯಕ್ಷರಾದ ಅನಸೂಯಮ್ಮ ಮುಂತಾದಹಿರಿಯರು ಭಾಗವಹಿಸಲಿದ್ದಾರೆ ಎಂದರು.ಬ್ಯಾರಿಕೇಡ್‌ ನಿರ್ಮಾಣ ಪೂರ್ಣಗೊಂಡಿಲ್ಲ:2008ರಿಂದ ಜಿಲ್ಲೆಯಲ್ಲಿ ಆನೆಗಳ ದಾಳಿ ನಿರಂತರವಾಗಿ ನಡೆಯುತ್ತಿದೆ.

ಅರಣ್ಯ ಗಡಿಯ ಗ್ರಾಮಗಳಲ್ಲಿ ಆನೆ ದಾಳಿಯಿಂದ ತೆಂಗು, ಮಾವು ಸೇರಿದಂತೆವಿವಿಧ ಬೆಳೆಗಳು ನಾಶವಾಗುತ್ತಿವೆ. ಮಾನವಹಾನಿಯೂ ಆಗಿದೆ. ಆದರೆ, ಹಾವಳಿ ತಡೆಗೆ ಅರಣ್ಯಇಲಾಖೆ ವಿಫ‌ಲವಾಗಿದೆ. ಕಾಡಂಚಿನಲ್ಲಿ ಬ್ಯಾರಿಕೇಡ್‌ ನಿರ್ಮಾಣ ಪೂರ್ಣಗೊಂಡಿಲ್ಲ. ಕಾಡುಪ್ರಾಣಿಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಕಾವೇರಿ ವನ್ಯಜೀವಿ ಧಾಮದ ಅಧಿಕಾರಿಗಳು ಮತ್ತು ಜಿಲ್ಲೆಯಅರಣ್ಯ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯೇ ಕಾರಣ. ಇತ್ತೀಚೆಗೆ ಕನಕಪುರದ ಸಾತನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ209ರಲ್ಲಿ ಆನೆಗಳ ಹಿಂಡು ಹಾದು ಹೋಗಿದೆ.ಇದನ್ನು ಪ್ರತ್ಯಕ್ಷ ಕಂಡವರಿದ್ದಾರೆ. ಹೀಗೆ ಹಿಂಡುಹಿಂಡು ಆನೆಗಳು ಗ್ರಾಮಗಳ ಬರುತ್ತಿವೆ ಎಂದುಆತಂಕ ವ್ಯಕ್ತಪಡಿಸಿದರು.

Advertisement

ಮಾನದಂಡದ ಪ್ರಕಾರ ಪರಿಹಾರವಿಲ್ಲ: ಕಾಡುಪ್ರಾಣಿಗಳ ದಾಳಿಯಿಂದಾದ ನಷ್ಟಕ್ಕೆ ಅರಣ್ಯ ಇಲಾಖೆಯೇ ನಷ್ಟ ಪರಿಹಾರ ಕೊಡಬೇಕಾಗಿದೆ. ಆದರೆ,ಇಲಾಖೆಯ ಮಾನದಂಡದ ಪ್ರಕಾರವು ಅಧಿಕಾರಿಗಳು ನಷ್ಟ ಭರಿಸಿಕೊಡುತ್ತಿಲ್ಲ, ತೆಂಗಿನ ಮರವೊಂದನ್ನು ಆನೆ ಉರುಳಿಸಿ, ಹೋದರೆ ರೈತನಿಗೆಸಿಗುವುದು 1500 ರೂ, ಮಾವಿನ ಮರಕ್ಕೆ 1200ರೂ ಈ ಪರಿಹಾರ ಸಾಲದಾಗಿದೆ.ಕಾಡು ಪ್ರಾಣಿಗಳದಾಳಿಯಿಂದ ರೈತ ಮೃತಪಟ್ಟರೆ ಅರಣ್ಯ ಇಲಾಖೆ 5ಲಕ್ಷ ರೂ ಪರಿಹಾರ ಕೊಡುತ್ತದೆ. ಒಬ್ಬ ರೈತನ ಬೆಲೆಕೇವ 5 ಲಕ್ಷ ರೂ ಮಾತ್ರವೇನಾ ಎಂದು ಪ್ರಶ್ನಿಸಿದರು. ಪ್ರತಿಭಟನೆಯ ವೇಳೆ ರೈತನ ಬೆಳೆ ಹಾನಿಗೆಕನಿಷ್ಠ5 ಪಟ್ಟು ಹೆಚ್ಚಿನ ಪರಿಹಾರವನ್ನುಕೊಡಬೇಕುಎಂದು ಆಗ್ರಹಿಸಲಾಗುವುದು ಎಂದರು.

ಸಂಸತ್‌ ಭವನದ ಮುಂಭಾಗ ಪ್ರತಿಭಟನೆ:ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳದಿದ್ದರೆ ತಮ್ಮಸಂಘಟನೆ ದೆಹಲಿಯಲ್ಲಿ ಸಂಸತ್‌ ಭವನದಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.

ಜಿಲ್ಲಾ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗಮ್ಮ, ಚನ್ನಪಟ್ಟಣ ಘಟಕದ ಅಧ್ಯಕ್ಷರಮೇಶ್‌, ರಾಮನಗರ ತಾಲೂಕು ಘಟಕದಅಧ್ಯಕ್ಷ ಸೀಬಕಟ್ಟೆಕೃಷ್ಣಪ್ಪ, ಮಾಗಡಿ ಘಟಕದ ಅಧ್ಯಕ್ಷಗೋವಿಂದರಾಜು, ಕನಕಪುರ ಘಟಕದ ಅಧ್ಯಕ್ಷಅನಂತರಾಮ, ಸಂಘಟನಾ ಕಾರ್ಯದರ್ಶಿ ಪಾದರಹಳ್ಳಿ ಕೃಷ್ಣಪ್ಪ, ಚನ್ನಪಟ್ಟಣದ ರೈತ ಮುಖಂಡಮಲ್ಲಿಕಾರ್ಜುನ, ರೈತ ಸಂಘದ ಪ್ರಮುಖರಾದವಿ.ಎಸ್‌.ಸುಜೀವನ್‌ ಕುಮಾರ್‌, ರಾಮಣ್ಣ, ದೇವರಾಜ್‌, ಕುಳ್ಳೇಗೌಡ, ಭಾರತೀಯ ವಿದ್ಯಾರ್ಥಿ ಪರಿಷತ್‌ನಕುಮಾರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next