Advertisement

ವೃಷಭಾವತಿ ನೀರು ಶುದ್ಧೀಕರಣಕ್ಕೆ  ಯೋಜನೆ

08:50 PM Jul 09, 2021 | Team Udayavani |

 ರಾಮನಗರ: ಮಾನವ ಬಳಕೆ ಹೊರತುಪಡಿಸಿ ಕೃಷಿ ಸೇರಿ ದಂತೆ ಉಳಿದೆಲ್ಲ ಚಟುವಟಿಕೆಗಳಿಗೆ ಬಳಕೆಯಗುವಂತೆ ವೃಷಭಾವತಿ ನದಿ ನೀರು ಶುದ್ಧೀಕರಣಕ್ಕೆ 1500 ಕೋಟಿ ರೂ. ಯೋಜನೆಯನ್ನು ಇನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶವಿದೆ ಎಂದು ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

Advertisement

ತಾಲೂಕಿನ ಬಿಡದಿ ಹೋಬಳಿ ಬೈರಮಂಗಲ ಕೆರೆವೀಕ್ಷಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಬೆಂಗಳೂರಿನಲ್ಲಿ ಉತ್ಪತ್ತಿಯಗುತ್ತಿರುವ ಶೇ.40 ರಷ್ಟು ಮಾಲಿನ್ಯ ನೀರು ವೃಷಭಾವತಿ ವ್ಯಾಲಿಯಲ್ಲಿ ಹರಿಯುತ್ತಿದೆ. ಇಲ್ಲಿ ಬಿಬಿಎಂಪಿಯವರು ಹಲವಾರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದ್ದಾರೆ.

ಆದರೆ, ಬಹುತೇಕ ಘಟಕಗಳು ಕೆಲಸ ಮಾಡುತ್ತಿಲ್ಲ. ಇನ್ನು ಮೂರು ತಿಂಗಳಲ್ಲಿ ಈ ಘಟಕಗಳನ್ನು ಆರಂಭಿಸುವುದಾಗಿ ಬಿಬಿ ಎಂಪಿ ಹೇಳಿದೆ. ಆದರೆ, ನದಿ ನೀರು ಮೂರನೇ ಹಂತದ ಶುದ್ಧೀಕರಣವಾದರೆ, ಕುಡಿಯಲು ಹೊರತುಪಡಿಸಿ ಉಳಿದ ಅನೇಕ ಕೆಲಸಗಳಿಗೆ ಆ ನೀರು ಬಳಸಬಹುದಾಗಿದೆ. ಮೂರನೇ ಹಂತದ ಶುದ್ಧೀಕರಣಕ್ಕೆ ಪ್ರತಿ ಎಂ.ಎಲ್. ಡಿಗೆ ಸುಮಾರು 1 ಕೋಟಿ ರೂ. ವೆಚ್ಚ ತಗಲುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 1500 ಎಂ.ಎಲ್ .ಡಿ ನೀರನ್ನು ಶುದ್ಧೀಕರಿಸುವ ಯೋಜನೆ ರೂಪಿಸಬೇಕಾಗಿದೆ. ಒಂದೇ ಬಾರಿಗೆ ಈ ಮೊತ್ತದ ಹಣ ಹೂಡಿಕೆ ಮಾಡಲಾಗುವುದಿಲ್ಲ. ಹೀಗಾಗಿ 5 ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವ ಉದ್ದೇಶವಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next