Advertisement

ಸಮಾನತೆ ಪ್ರತಿಪಾದಿಸಿದ ಡಾ.ಸಿದ್ದಲಿಂಗಯ್ಯ ಜಾತ್ಯತೀತ ಕವಿ

05:53 PM Jun 26, 2021 | Team Udayavani |

ರಾಮನಗರ: ಕವಿ ಸಿದ್ದಲಿಂಗಯ್ಯ ಅವರುಜಾತ್ಯತೀತ ಕವಿ. ಪ್ರಚಲಿತ ಸಾಮಾಜಿಕವ್ಯವಸ್ಥೆಯಲ್ಲಿದ್ದ ಜಾತಿಯನ್ನು ವಿರೋಧಿಸಿ,ಶೋಷಣೆಯ ಸರಪಳಿಯನ್ನು ಕಳಚಿ, ಮಾನವಸಮಾನತೆಯನ್ನು ಪ್ರತಿಪಾದಿಸಿದ ಮಹತ್ವದಕವಿಯಾಗಿದ್ದರು ಎಂದು ವಿಧಾನ ಪರಿಷತ್ತು ಸದಸ್ಯಸಿ.ಎಂ.ಲಿಂಗಪ್ಪ ಹೇಳಿದರು.

Advertisement

ಜಾನಪದ ಲೋಕದ ಬಳಿಯ ಬಿ.ಜಿ.ಎಸ್‌ಪದವಿಪೂರ್ವ ಕಾಲೇಜು ಆವರಣದಲ್ಲಿಕರ್ನಾಟಕರಕ್ಷಣಾ ವೇದಿಕೆಯ ರಾಮನಗರ ಜಿಲ್ಲಾ ಘಟಕಮತ್ತು ಶ್ರೀಆದಿಚುಂಚನಗಿರಿ ಶಾಖಾ ಮಠದಿಂದನಡೆದ ಸ್ವಾತಂತ್ರ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಕವಿ ಡಾ.ಸಿದ್ದಲಿಂಗಯ್ಯ,ಸಂಶೋಧಕ ಹ.ಕ.ರಾಜೇಗೌಡ ಅವರಿಗೆ ನುಡಿನಮನ ಮತ್ತು ಗೀತ ಗಾಯನ ಕಾರ್ಯಕ್ರಮದಲ್ಲಿಮಾತನಾಡಿ, ಡಾ.ಸಿದ್ದಲಿಂಗಯ್ಯ ಸಾಹಿತ್ಯಲೋಕದಲ್ಲಿ ದಲಿತ ಕವಿ ಎಂದು ಜಾತಿ ಸೂಚಕಪದದಲ್ಲಿ ಗುರುತಿಸಿರುವುದು ತೀರ ಅಸಮಂಜಸ.”ನಾನೊಂದಿಷ್ಟು ಪದ್ಯ ಗೀಚಿದರೆ ಒಕ್ಕಲಿಗ ಕವಿಸಿ.ಎಂ.ಲಿಂಗಪ್ಪ” ಎಂದು ಕರೆಯುವುದಿಲ್ಲ.

ಹೀಗಿರುವಾಗ ಕವಿ ಸಿದ್ದಲಿಂಗಯ್ಯ ಅವರುಜಾತ್ಯತೀತಕವಿ ಎಂದರು.ವೈಯಕ್ತಿಕವಾಗಿ ನೋವಾಗಿದೆ: ಮನುಷ್ಯಮನುಷ್ಯರ ನಡುವೆ ಅಸಮಾನತೆಯನ್ನು ಸೃಷ್ಟಿಸಿರುವ ಜಾತಿ ವ್ಯವಸ್ಥೆ ವಿರುದ್ಧ ಬಂಡಾಯದ ಧ್ವನಿಮೊಳಗಿಸಿದ್ದ ಡಾ.ಸಿದ್ದಲಿಂಗಯ್ಯ ನಿಧನ ನನಗೆವೈಯಕ್ತಿಕವಾಗಿ ಹಾಗೂ ನಾಡಿನ ಸಾಹಿತ್ಯ,ಸಂಘಟನೆ, ಸಾಂಸ್ಕೃತಿಕ ಲೋಕಕ್ಕೆ ನಷ್ಟವಾಗಿದೆ.ಅವರು ಇನ್ನಷ್ಟು ದಶಕಗಳು ನಮ್ಮೊàಟ್ಟಿಗೆಇರಬೇಕಾಗಿತ್ತು ಎಂದರು.

ಅಕ್ಷರ ಸಮಯ ಸಾರಿದ ಕವಿ: ಕನ್ನಡ ಪ್ರಾಧ್ಯಾಪಕಡಾ.ಎಲ್‌.ಸಿ.ರಾಜು ಮಾತನಾಡಿ, ತಳಸಮುದಾಯದವರ ಸಮಸ್ಯೆಗಳನ್ನುಸಾಮಾಜಿಕವಾಗಿ ಅನಾವರಣಗೊಳಿಸಿದ, ದಲಿತಸಂವೇದನೆಗಳಿಗೆ ಅಕ್ಷರ ರೂಪ ನೀಡಿ, ಸಮಸಮಾಜದ ಕನಸು ಕಂಡ ಸಾತ್ವಿಕ ಸಿಟ್ಟಿನ ಕವಿಅಸಮಾನತೆಯ ವಿರುದ್ಧ ‘ಅಕ್ಷರ ಸಮರ’ ಸಾರಿದಚಿಂತನಶೀಲ ಕವಿ ಡಾ.ಸಿದ್ದಲಿಂಗಯ್ಯ ಅವರಕವಿತೆಗಳು ಸಮಕಾಲೀನ ನೆಲೆಯಲ್ಲಿ ಅಧ್ಯಯನಮಾಡಲು ಸರ್ಕಾರ ಡಾ.ಸಿದ್ದಲಿಂಗಯ್ಯ ಅಧ್ಯಯನಪೀಠ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಹೊಳಸಾಲಯ್ಯ ಮತ್ತು ತಂಡದವರುಡಾ.ಸಿದ್ದಲಿಂಗಯ್ಯ ರಚಿತ ಗೀತೆಗಳ ಗಾಯನನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಆದಿಚುಂಚನಗಿರಿ ಶಾಖಾ ಮಠದಶ್ರೀಅನ್ನದಾನೇಶ್ವರ ಸ್ವಾಮೀಜಿ ವಹಿಸಿದ್ದರು. ಸಾಹಿತಿಡಾ.ಬೈರಮಂಗಲ ರಾಮೇಗೌಡ, ಚಿಂತಕಜಿ.ಶಿವಣ್ಣ, ತಾಪಂ ಮಾಜಿ ಅಧ್ಯಕ್ಷ ಜಿ.ಎನ್‌.ನಟರಾಜು, ಕರವೇ ಜಿಲ್ಲಾಧ್ಯಕ್ಷ ಕಬ್ಟಾಳೇಗೌಡ,ಕ.ರ.ವೇ ರಾಜ್ಯ ಘಟಕದ ಸಂಘಟನಾಕಾರ್ಯದರ್ಶಿ ಎಂ.ಎನ್‌.ಸತ್ಯನಾರಾಯಣ,ಕರವೇ ತಾಲೂಕು ಘಟಕಗಳ ಅಧ್ಯಕ್ಷರಾದಜಯರಾಮೇಗೌಡ, ಹೂ.ಪು.ಸಾಗರ್‌, ಟಿ.ಆರ್‌.ದೇವರಾಜು, ನಾಗರಾಜು, ಸಾಹಿತಿಕೂ.ಗಿ.ಗಿರಿಯಪ್ಪ, ಡಾ.ವೆಂಕಟಾಚಲಯ್ಯ,ರಂಗಕರ್ಮಿ ಎ.ಆರ್‌.ಗೋಂದಸ್ವಾಮಿ,ಕುಂಬಾಪುರಬಾಬು,ಪ್ರಾಂಶುಪಾಲಎಂ.ಸಿ.ಗಿರೀಶ್‌ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next