Advertisement

ರಾಮನಗರ: ಕೆಂಪೇಗೌಡ ರಥಯಾತ್ರೆ ವೇಳೆ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವು

06:07 PM Nov 03, 2022 | Team Udayavani |

ರಾಮನಗರ: ಇಂದು ಬೆಳಗ್ಗೆಯಿಂದ ಕುದೂರು ಹೂಬಳಿಯ ಶ್ರೀಗಿರಿಪುರ, ಅದರಂಗಿ, ಕುದೂರು ಗ್ರಾಮದಲ್ಲಿ ಕೆಂಪೇಗೌಡರ ಮೃತ್ತಿಕೆ ಸಂಗ್ರಹಿಸಿ ಕುದೂರಿನಿಂದ ಮರೂರಿಗೆ ತೆರಳುವ ಮರೂರು ಗ್ರಾಮದ ತಿರುವಿನಲ್ಲಿ ಕೆಂಪೇಗೌಡ ವಾಹನದ ಗಾಡಿಯಲ್ಲಿ ಕುಳಿತಿದ್ದವರೊಬ್ಬರು ಆಯ ತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಪೂಜಾ ಕುಣಿತದ ಶ್ರೀನಿವಾಸ್ (29) ಮೃತಪಟ್ಟ ವ್ಯಕ್ತಿ.

Advertisement

ಘಟನೆಯ ವಿವರ

ಕುದೂರಿಗೆ ಆಗಮಿಸಿದ ಕೆಂಪೇಗೌಡ ಮೃತ್ತಿಕೆ ಸಂಗ್ರಹ ಕಾರ್ಯಕ್ರಮಕ್ಕೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಎಚ್.ಎಂ.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ಪ್ರಸಾದ್ ಗೌಡ ಚಾಲನೆ ನೀಡಿದರು. ನಂತರ ವಾಹನ ಮುಂದೆ ಸಾಗಿತು. ಮರೂರು ಗ್ರಾಮದ ಬಳಿ ವಾಹನ ತಿರುವು ಪಡೆದುಕೂಂಡ ಸಂದರ್ಭ ವಾಹನದಲ್ಲಿದ್ದ ಪೂಜಾ ಕುಣಿತದವರೊಬ್ಬರು ಕೆಳಕ್ಕೆ ಬೀಳುತ್ತಿದ್ದು, ಕೆಳಗೆ ಬೀಳುತ್ತದೆ ಎಂದು ಹಿಡಿದುಕೂಳ್ಳಲು ಹೋಗಿ ಆಯ ತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next