Advertisement

Ramanagar; ಅಧಿಕಾರಿಗೆ ಚಪ್ಪಲಿಯಲ್ಲಿ ಹೊಡೆಸುತ್ತೇನೆ…: ಮಾಜಿ ಶಾಸಕ ಮಂಜುನಾಥ್ ಆವಾಜ್

03:31 PM Jan 08, 2024 | Team Udayavani |

ರಾಮನಗರ: “ಅಧಿಕಾರಿಗೆ ಮಾನ ಮರ್ಯಾದೆ ಇಲ್ಲ, ಇವನಿಗೆ ಚಪ್ಪಲಿಯಲ್ಲಿ ಹೊಡೆಸುತ್ತೇನೆ…” ಇದು ಡೈರಿ ಕಾರ್ಯದರ್ಶಿ ಭ್ರಷ್ಟಾಚಾರ ಆರೋಪ ಮುಚ್ಚಿಹಾಕಲು ಮುಂದಾದ ಅಧಿಕಾರಿಗೆ ಮಾಜಿ ಶಾಸಕ ಎ.ಮಂಜುನಾಥ್ ಅವಾಜ್ ಹಾಕಿದ ಪರಿ.

Advertisement

ಬಿಡದಿಯ ಬಾನಂದೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಅಮಾನತು ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಪ್ರತಿಭಟನೆ ನಡೆಸುತ್ತಿದೆ.

ಯಾವ ಬೋ*ಮಗ ಹೇಳಿದ್ದಾನೆಂದು ಅಧಿಕಾರಿ ಅಮಾನತು ಮಾಡದೆ ಸ್ಟೇ ತಂದಿದ್ದಿಯಾ ಎಂದು ಸಹಾಯಕ ನಿಬಂಧಕ ಹರೀಶ್ ಗೆ ಮೇಲೆ ಮಾಜಿ ಶಾಸಕ ಮಂಜುನಾಥ್ ಅವಾಜ್ ಹಾಕಿದ್ದಾರೆ.

‘ಎಂಥಾ ಮಕ್ಳು ಇವ್ರು, ಪೊಲೀಸ್, ನಮಗೂ ಯಾರಿಗೂ ನೆಮ್ಮದಿ ಇಲ್ಲ. ಎಲ್ಲಾ ಊರುಗಳಲ್ಲೂ ತಲೆ ಹೊಡೆಯುವ ಕೆಲಸ ಮಾಡಿದ್ದಾರೆ. ರೈತರ ಶಾಪ ನಿನ್ನ ಬಿಡುವುದಿಲ್ಲ’ ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.

ನಾಳೆ ನಿಮ್ಮ ಕಚೇರಿಗೆ ಬಂದು ಬೀಗ ಹಾಕುತ್ತೇವೆ. ಕೂಡಲೆ ಭ್ರಷ್ಟಾಚಾರ ಮಾಡಿದವರನ್ನು ಅಮಾನತು ಮಾಡದಿದ್ದರೆ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಎ.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next