Advertisement

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

08:13 PM Mar 22, 2024 | Team Udayavani |

ರಾಮನಗರ: ಹಾಸನದವರು ನಮ್ಮ ಜಿಲ್ಲೆಯಿಂದ ಪ್ರಧಾನಮಂತ್ರಿ, ಮುಖ್ಯಮಂತ್ರಿ ಆದರು. ಮಗ, ಸೊಸೆ, ಮೊಮ್ಮಗನನ್ನು ತಂದರು. ಈಗ ಅಳಿಯನನ್ನು ರಾಜಕೀಯಕ್ಕೆ ಕರೆದುಕೊಂಡು ಬಂದಿದ್ದಾರೆ. ಅವರಿಗೆ ರಾಮನಗರ ಜಿಲ್ಲೆಯ ಯಾರನ್ನೂ ಬೆಳೆಸಲು ಸಾಧ್ಯವಾಗಲಿಲ್ಲವೇ ಎಂದು ಸಂಸದ ಡಿ.ಕೆ.ಸುರೇಶ್‌ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬದ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ಚನ್ನಪಟ್ಟಣ ತಾಲೂಕಿನ ಕಾಡಂಕನಹಳ್ಳಿಯಲ್ಲಿ ಗುರುವಾರ ರಾತ್ರಿ ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಯಾರೂ ಶಕ್ತಿ ಇರುವವರು ಇಲ್ಲವೇ? ಅವರನ್ನು ಪ್ರಶ್ನಿಸುವ ಹಕ್ಕು ಈ ಕ್ಷೇತ್ರದ ಮತದಾರರಿಗೆ ಇದ್ದು, ನೀವು ಈ ಪ್ರಶ್ನೆಯನ್ನು ಅವರ ಮುಂದೆ ಎತ್ತಬೇಕು. ಈ ಜಿಲ್ಲೆಯ ಮಗನನ್ನು ಗೆಲ್ಲಿಸುವ ಮೂಲಕ ಜಿಲ್ಲೆಯ ಸ್ವಾಭಿಮಾನ ಉಳಿಸಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next