Advertisement

Ramanagara; ಬಿಡದಿ ಬಳಿ ಹೊಸ ಬೆಂಗಳೂರು ಕಟ್ಟುವುದಾಗಿ ಘೋಷಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

03:25 PM Feb 25, 2024 | Team Udayavani |

ರಾಮನಗರ: ಕೆಲ ತಿಂಗಳ ಹಿಂದೆ ರಾಮನಗರಕ್ಕೆ ಬೆಂಗಳೂರಿನ ನಾಮಕರಣದ ಜಪ ಮಾಡಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮತ್ತೆ ಅದೇ ಮಾತನ್ನು ಪುರುಚ್ಛರಿಸಿದ್ದಾರೆ. ಬಿಡದಿ ಬಳಿ ಹೊಸ ಬೆಂಗಳೂರು ಕಟ್ಟುವುದಾಗಿ ಘೋಷಿಸಿದ  ಬಿಡದಿಯ ಗೃಹಲಕ್ಷ್ಮಿಯರ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

Advertisement

ಬಿಡದಿಯವರೆಗೆ ಮೆಟ್ರೋ ರೈಲು ಸೇವೆಗೆ ಯೋಜನೆ ರೂಪಿಸಿದ್ದೇನೆ. ಬಿಡದಿ ಪ್ರಾಧಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಬದಲಿಸಲಾಗುವುದು ಎಂದಿದ್ದಾರೆ.

ನಾವು ಬೆಂಗಳೂರಿನವರು, ಇಲ್ಲಿಂದ ಸಂಗಮ‌ದವರೆಗೆ, ಕುಣಿಗಲ್ ಗಡಿಯವರೆಗಿನ ಎಲ್ಲರೂ ಬೆಂಗಳೂರಿನವರು. ನಾನು ಬೆಂಗಳೂರಿನ ಮಂತ್ರಿಯಾಗಿದ್ದೇನೆ, ನಾವೆಲ್ಲ ಬೆಂಗಳೂರಿನ‌ ಸ್ವಾಭಿಮಾನ, ಸೌಲಭ್ಯ ಪಡೆದುಕೊಳ್ಳಬೇಕು. ನಿಮ್ಮ ಆಸ್ತಿಗಳಿಗೆ ಬೆಲೆ, ನಿಮ್ಮ ಮಕ್ಕಳಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತೇನೆ ಎಂದ ಡಿಕೆ ಶಿವಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next