Advertisement

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

05:04 PM May 18, 2024 | Team Udayavani |

ರಾಮನಗರ: ಮದ್ಯವ್ಯಸನಿಯಾಗಿದ್ದ ವ್ಯಕ್ತಿಯೊಬ್ಬ ತನ್ನ ಅಪ್ರಾಪ್ತ ವಯಸ್ಸಿನ ಮಕ್ಕಳ ಬೆನ್ನು, ಕೈಗಳನ್ನು ಕಾದ ಕಬ್ಬಿಣದಿಂದ ಸುಟ್ಟ ಅಮಾನವೀಯ ಘಟನೆ ಮಾಗಡಿ ತಾಲೂಕಿನ ಸೋಮೇಶ್ವರ ಕಾಲೋನಿಯಲ್ಲಿ ನಡೆದಿದೆ.

Advertisement

ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಗಿರೀಶ್ ಎಂಬಾತ ತಾಯಿ ಇಲ್ಲದ ಹತ್ತು ವರ್ಷದ ಹೆಣ್ಣು ಹಾಗೂ ಏಳು ವರ್ಷದ ಗಂಡು ಮಗುವಿಗೆ ಚಿತ್ರ ಹಿಂಸೆ ಕೊಟ್ಟಿದ್ದಾನೆ.

ಮಕ್ಕಳ ಮೈ ಸುಟ್ಟು ಭಿಕ್ಷಾಟನೆ ನಡೆಸಲು ಕಳುಹಿಸುತ್ತಿದ್ದ ಎಂದು ತಿಳಿದು ಬಂದಿದೆ. ನೆರೆಹೊರೆಯ ಜನರು ಮಕ್ಕಳ ಮೈಯಲ್ಲಿ ಆಗಿದ್ದ ಸುಟ್ಟ ಗಾಯ ಕಂಡು ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಮಕ್ಕಳ ಸುರಕ್ಷತೆ ಮತ್ತು ಭವಿಷ್ಯದ ದೃಷ್ಟಿಯಿಂದ ಬಾಲಮಂದಿರಕ್ಕೆ ಸೇರಿಸಲಾಗಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next