Advertisement

Ramanagar: ಸಾರಿಗೆ ಬಸ್‌ಗಳಲ್ಲಿ ನೂಕುನುಗ್ಗಲು: ಪ್ರಯಾಣಿಕರ ಪರದಾಟ

03:33 PM Oct 26, 2023 | Team Udayavani |

ರಾಮನಗರ: ಸರಣಿ ರಜೆ ಮುಗಿದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ಆಗಮಿಸಿದ ಜನತೆ ಮರಳಿ ಬೆಂಗಳೂರಿಗೆ ತೆರಳಲು ಮುಂದಾದ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗಿತ್ತು.

Advertisement

ಬೆಂಗಳೂರಿಗೆ ತೆರಳಲು ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವೆನಿಸಿತ್ತು. ಬೆಂಗಳೂರು-ಮೈಸೂರು ನಡುವೆ ಸಾರಿಗೆ ಸಂಸ್ಥೆಯ ವತಿಯಿಂದ ಹೆಚ್ಚುವರಿ ಬಸ್‌ ಸೌಲಭ್ಯವನ್ನು ಕಲ್ಪಿಸ ಲಾಗಿತ್ತಾದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬಸ್‌ಗಳು ಕಿಕ್ಕಿರಿದು ತುಂಬಿದ್ದವು. ಚನ್ನಪಟ್ಟಣ, ರಾಮನಗರ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ದೊಡ್ಡ ಹಿಂಡೇ ಕಂಡು ಬಂದಿತು.

ತಾಸುಗಟ್ಟಲೆ ಕಾಯ್ದು ನಿಂತರೂ ಬಸ್‌ ಗಳಿಗೆ ಹತ್ತಲಾಗದೆ ಪ್ರಯಾಣಿಕರು ಪರ ದಾಡುತ್ತಿದ್ದ ದೃಶ್ಯ ಸಾಮಾನ್ಯವೆನಿಸಿತ್ತು. ಬಸ್‌ಗಳ ಜೊತೆಗೆ ಬೆಂಗಳೂರು- ಮೈಸೂರು ಮಾರ್ಗವಾಗಿ ಸಂಚರಿಸುವ ರೈಲುಗಳಲ್ಲಿ ಸಹ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದು ಕಂಡು ಬಂದಿತು.

ತಾಸುಗಟ್ಟಲೆ ಕಾಯ್ದು ನಿಂತ ವಿಧಿ ಇಲ್ಲದೆ ನೂಕುನುಗ್ಗಲಿನ ನಡುವೆ ಬೆಂಗಳೂರಿನ ವರಗೆ ನಿಂತುಕೊಂಡೇ ಪ್ರಯಾಣಿಸಲು ಮುಂದಾಗುತ್ತಿದ್ದರೆ, ಮತ್ತೂಂದೆಡೆ ಕೆಎಸ್‌ ಆರ್‌ಟಿ ಹೆಚ್ಚಿನ ಬಸ್‌ ವ್ಯವಸ್ಥೆ ಮಾಡಿಲ್ಲ ಎಂದು ಶಪಿಸುತ್ತಿದ್ದು ಕಂಡು ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next