Advertisement

ಶಾಲೆಯಲ್ಲೇ ಶಿಕ್ಷಕಿಗೆ ಬೆಂಕಿ ಹಚ್ಚಿ ಕೊಲ್ಲಲೆತ್ನಿಸಿದ ಪತಿ!

03:01 PM Aug 16, 2017 | Team Udayavani |

ಮಾಗಡಿ: ಇಲ್ಲಿನ ಶಂಭಯ್ಯನ ಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಿಕ್ಷಕಿಯೊಬ್ಬರಿಗೆ ಆಕೆಯ ಪತಿ ಬೆಂಕಿ ಹಚ್ಚಿ ಹತ್ಯೆಗೈಯಲು ಯತ್ನಿಸಿರುವ ಘಟನೆ ನಡೆದಿದೆ.

Advertisement

ಶಿಕ್ಷಕಿ ಕೆ.ಜಿ. ಸುನಂದಾ ಎನ್ನುವವರಿಗೆ 2ನೇ ಪತಿ  ರೇಣುಕಾರಾಧ್ಯ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹೊತ್ತಿಕೊಂಡಾಗ ಜೋರಾಗಿ ಶಿಕ್ಷಕಿ ಬೊಬ್ಬಿಟ್ಟಿದ್ದು, ಸ್ಥಳದಲ್ಲಿದ್ದ ಶಿಕ್ಷಕ ಶಿವಣ್ಣ ಬೆಂಕಿ ನಂದಿಸಿ ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಗಡಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕೈ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಶೇ.40 ರಷ್ಟು ಸುಟ್ಟಗಾಯಗಳಿಗೊಳಗಾಗಿರುವ ಸುನಂದಾ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು , ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. 

ಮಾಗಡಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿ ರೇಣುಕಾರಾಧ್ಯನಿಗಾಗಿ ಬಲೆ ಬೀಸಿದ್ದಾರೆ. 

ವೃತ್ತಿಯಲ್ಲಿ ಶಿಕ್ಷಕನಾಗಿರುವ ರೇಣುಕಾರಾಧ್ಯ ಶಿಕ್ಷಕಿಗೆ ಪರಿಚಯಸ್ಥನೆ ಆಗಿದ್ದು, 2 ನೇ ವಿವಾಹವಾಗಿದ್ದರು. ಸುನಂದಾ ಅವರ ಬಳಿ ಲಕ್ಷಾಂತರ ರೂಪಾಯಿ ಹಣ ಕೇಳಿದ್ದು ಕೊಡದೇ ಇದ್ದ ಕಾರಣಕ್ಕೆ ಕ್ರೂರ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಸುನಂದಾ ಅವರು ಮಗನನ್ನು ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌ ವ್ಯಾಸಂಗಕ್ಕೆ ಸೇರಿಸಿದ್ದು ಹಣ ಇಲ್ಲ ಎಂದಿದ್ದರು  ಎನ್ನಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next