Advertisement

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ

02:42 PM Feb 06, 2021 | Team Udayavani |

ಬಂಗಾರಪೇಟೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಉದಾರವಾಗಿ ಸಾತ್ವಿಕ ದೇಣಿಗೆ ನೀಡುವಂತೆ ಸಮಸ್ತ ಸಮಾಜ ಬಾಂಧವರಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ತೀರ್ಥಕ್ಷೇತ್ರ ವಿನ್ಯಾಸವು ವಿನಂತಿಸುತ್ತಿದೆ ಎಂದು ಜಿಪಂ ಸದಸ್ಯ ಬಿ.ವಿ.ಮಹೇಶ್‌ ಹೇಳಿದರು.

Advertisement

ದೇಶಿಹಳ್ಳಿ ವಾರ್ಡ್‌ನಲ್ಲಿ ಮನೆ ಮನೆಗೂ ತೆರಳಿ ದೇಣಿಗೆ ಸ್ವೀಕರಿಸಿ ಮಾತನಾಡಿದ ಅವರು,ಪಕ್ಷಭೇದ ಮರೆತು ಭಕ್ತರು ದೇಣಿಗೆ ಸಮರ್ಪಣೆ ಮಾಡಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ :13ರಿಂದ ಸಂತ ಸೇವಾಲಾಲ್‌ ಜಯಂತಿ

ಪ್ರತಿಯೊಬ್ಬ ಭಕ್ತಾದಿಗಳು ತಮ್ಮ ಕೈಲಾದಷ್ಟು ಹಣ ರೂಪದಲ್ಲಾದರೂ ಸರಿ ಅಥವಾ ಇತರೆ ರೂಪದಲ್ಲಾದರೂ ಸಹಾ ಮಂದಿರಕ್ಕೆ ಸಮರ್ಪಣೆ ಮಾಡಿ. ಆದರೆ ಇದು ಕಡ್ಡಾಯವಾಗಿರುವುದಿಲ್ಲ. ತಮ್ಮ ಸ್ವಯಂ ಇಚ್ಚೆಯಿಂದ ಯಾರು ಬೇಕಾದರೂ ದೇಣಿಗೆ ನೀಡಬಹುದು. ಪುರಸಭೆ ಸದಸ್ಯೆ ಸೌಂದರ್ಯ ಪ್ರಭಾಕರರಾವ್‌, ಮುಖಂಡರಾದ ಡಿ.ರಾಮಚಂದ್ರ, ಮೇಸ್ತ್ರಿ ರವಿ, ಬಿ.ನಾರಾಯಣ್‌, ಎಸ್‌.ಮಂಜುನಾಥ್‌, ಜೆ.ಜಯಪ್ರಕಾಶ್‌, ಬಿ.ದಯಾನಂದ್‌, ಶ್ರೀನಾಥ್‌, ಮಹೇಂದ್ರ, ಆರ್‌.ಎಸ್‌.ಮಂಜುನಾಥ್‌, ವೆಂಕಟರಾಮ್‌, ಶಿವು, ಚಂದ್ರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next