Advertisement

Tibet, ಮ್ಯಾನ್ಮಾರ್‌ನಲ್ಲಿಯೂ ಜನಜನಿತ ರಾಮಕಥಾ!

11:57 PM Jan 09, 2024 | Team Udayavani |

ಟಿಬೆಟ್‌ ಹಾಗೂ ಮ್ಯಾನ್ಮಾರ್‌ನಲ್ಲಿಯೂ ರಾಮಾಯಣವನ್ನು ಕಾಣಬಹುದು. 20ನೇ ಶತಮಾನದಲ್ಲಿ ಟಿಬೆಟ್‌ನ ಡುನಹುಆಂಗ್‌ನಲ್ಲಿರುವ ಮೊಗಾಓ ಗುಹೆಗಳಲ್ಲಿ ಟಿಬೆಟಿಯನ್‌ ರಾಮಾಯಣಕ್ಕೆ ಸಂಬಂಧಿಸಿದ, ಅಪೂರ್ಣವಾಗಿರುವ ಹಲವು ಹಸ್ತಪ್ರತಿಗಳು ದೊರೆತಿವೆ. ಈ ರಾಮಾಯಣದ ಕಥೆಗಳು 4 ರಿಂದ 11ನೇ ಶತಮಾನದಲ್ಲಿ ಬಹಳ ಜನಪ್ರಿಯವಾಗಿದ್ದವು ಎಂಬುದು ಪೌರಾಣಿಕ ಅಧ್ಯಯನಗಳಲ್ಲಿ ದೃಢಪಟ್ಟಿದೆ. ಈ ಡುನಹುಆಂಗ್‌ ಗುಹೆಗಳಲ್ಲಿ ಅನೇಕ ಸಂಖ್ಯೆಯಲ್ಲಿ ಈ ಹಸ್ತಪ್ರತಿಗಳು ಇರುವುದರಿಂದ ಲೈಬ್ರರಿ ಗುಹೆಗಳು ಎಂದು ಇದನ್ನು ಕರೆಯಲಾಗುತ್ತದೆ.

Advertisement

ಈ ಗುಹೆಗಳಲ್ಲಿ ಲಭಿಸಿರುವ ರಾಮಾಯಣದ ಹಸ್ತಪ್ರತಿಗಳು ಅತೀ ಪ್ರಾಚೀನವಾದ ಟಿಬೆಟಿಯನ್‌ ಭಾಷೆಯಲ್ಲಿ ಇದೆ. ಭಾರತದ ವಾಲ್ಮೀಕಿ ರಾಮಾಯಣಕ್ಕೂ, ಟಿಬೆಟಿಯನ್‌ ರಾಮಾಯಣಕ್ಕೂ ಬಹಳಷ್ಟು ವ್ಯತ್ಯಾಸಗಳಿವೆಯಾದರೂ ಭಾರತದಲ್ಲಿ ಪ್ರಚಲಿತವಿರುವ ರಾಮಾಯಣದಲ್ಲಿ ಬರುವ ಬಹುತೇಕ ಪಾತ್ರಗಳು ಟಿಬೆಟಿಯನ್‌ ರಾಮಾಯಣದಲ್ಲೂ ಬರುತ್ತವೆ ಮತ್ತು ಇಲ್ಲಿಯೂ ರಾಮ-ಸೀತೆಯರೇ ಪ್ರಮುಖ ಪಾತ್ರಧಾರಿಗಳು.
ಟಿಬೆಟಿಯನ್‌ ರಾಮಾಯಣದಲ್ಲಿ ರಾಮನು ದಶರಥನ ಕೊನೆಯ ಮಗನಾಗಿದ್ದು, ಲಕ್ಷಣನು ಮೊದಲ ಪುತ್ರನಾಗಿರುತ್ತಾನಂತೆ. ಜತೆಗೆ ಭರತ ಹಾಗೂ ಶತ್ರುಘ್ನರ ಯಾವುದೇ ಉಲ್ಲೇಖಗಳು ಇದರಲ್ಲಿ ಕಂಡುಬರುವುದಿಲ್ಲ. ಇನ್ನು ಈ ರಾಮಾಯಣದಲ್ಲಿ ಸೀತೆ, ರಾವಣನ ಮಗಳು ಎಂಬ ಉಲ್ಲೇಖವಿದೆ.

ಟಿಬೆಟಿಯನ್‌ ರಾಮಾಯಣದ ಮತ್ತೂಂದು ವಿಶೇಷತೆ ಎಂದರೆ, ಪತ್ರ ಬರಹ. ಇದರ ಪ್ರಕಾರ ರಾಮನು ಲಂಕಾದ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಸುಗ್ರೀವನಿಗೆ ಪತ್ರವನ್ನು ಬರೆದಿದ್ದನು, ಅಲ್ಲದೇ ಸೀತಾಳಿಗೂ ತಾನು ರಕ್ಷಣೆಗೆ ಬರುವುದಾಗಿ ಪತ್ರವನ್ನು ಬರೆದಿದ್ದ. ಅದಕ್ಕೆ ಪತ್ರದ ಮೂಲಕವೇ ಸೀತೆ ಉತ್ತರಿಸಿದ್ದಳು.

ಮ್ಯಾನ್ಮಾರ್‌ನಲ್ಲೂ ರಾಮಲೀಲಾ ಪ್ರದರ್ಶನ

ಈ ಹಿಂದೆ ಬರ್ಮಾ ಎಂದು ಕರೆಯಲ್ಪಡುತ್ತಿದ್ದ ಮ್ಯಾನ್ಮಾರ್‌ನಲ್ಲಿ ಬರ್ಮಾ ಆವೃತ್ತಿಯ ರಾಮಾಯಣ ಪ್ರಚಲಿತದಲ್ಲಿದೆ. ಇಲ್ಲಿ ರಾಮಾಯಣವನ್ನು “ಯಮ ಜಟಡಾ’ ಎಂದು ಕರೆಯುಲಾಗುತ್ತದೆ. ಮ್ಯಾನ್ಮಾರ್‌ನಲ್ಲಿ ರಾಷ್ಟ್ರೀಯ ಪುಸ್ತಕದ ಮಾನ್ಯತೆ ಈ ರಾಮಾಯಣಕ್ಕಿದೆ. ಯಮ ಜಟಡಾದ ಒಂಬತ್ತು ಪ್ರಚಲಿತವಾದ ತುಣುಕುಗಳು ಮ್ಯಾನ್ಮಾರ್‌ನಲ್ಲಿವೆ. ಇದರ ಬರ್ಮಾ ಆವೃತ್ತಿಯ ಪುಸ್ತಕದ ಹೆಸರು “ಯಮಾಯಣ’ ಎಂದು.

Advertisement

ಬರ್ಮಾದಲ್ಲಿ ಯಮ ಎಂದರೆ ರಾಮ ಹಾಗೂ ಮೆಂತಿಡಾ ಎಂದರೆ ಸೀತಾ ಎಂದು ಅರ್ಥ. ಯಮ ಜಟಡಾವು 11ನೇ ಶತಮಾನದಲ್ಲಿ ರಾಜ ಅನವರತನ ಕಾಲದಲ್ಲಿ ಪರಿಚಯಿಸಲಾದ ಜಾತಕ ಕತೆಗಳ ಒಂದು ಭಾಗವೆಂದು ಹೇಳಲಾಗುತ್ತದೆ. ಹೆಚ್ಚಿನ ಭಾಗವು ವಾಲ್ಮೀಕಿ ರಾಮಾಯಣದೊಂದಿಗೆ ಹೋಲಿಕೆಯನ್ನು ಹೊಂದಿದೆ. ಭಾರತದಲ್ಲಿ ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ರಾಮಲೀಲಾವನ್ನು ಪ್ರದರ್ಶಿಸಿದಂತೆ ಅಲ್ಲಿ ಯಮ ಜಟಡಾವನ್ನು ನಾಟಕದ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಮ್ಯಾನ್ಮಾರ್‌ನ ಸಂಸ್ಕೃತಿ, ಜಾನಪದ ಸಂಗತಿಗಳನ್ನು ಇದು ಒಳಗೊಂಡಿದ್ದು ದೃಶ್ಯರೂಪಕದ ಮಾದರಿಯಲ್ಲಿ ಪ್ರದರ್ಶಿಸಲ್ಪಡುತ್ತದೆ.

ರಾಮನ ಕರೆದರೆ ಹನುಮನೂ ಬರುವ ತಾರಕ ಮಂತ್ರ
“ಶ್ರೀರಾಮ ಜಯರಾಮ ಜಯಜಯ ರಾಮ’ವನ್ನು ರಾಮತಾರಕ ಮಂತ್ರವೆಂದು ಹೇಳುತ್ತಾರೆ. ಸ್ವತಃ ಶಿವ ಪಾರ್ವತಿಗೆ ಉಪದೇಶಿಸಿದ ಮಂತ್ರ ಇದು ಎಂಬ ಪ್ರತೀತಿಯಿದೆ. ಈ ಮಂತ್ರ ಕ್ಕೊಂದು ವಿಶೇಷವಿದೆ. ಇದು ರಾಮನಿಗೆ ಸಂಬಂಧಿಸಿರುವ ಮಂತ್ರವಾದರೂ, ಇದನ್ನು ಪಠಿಸಿದಾಗ ಅಲ್ಲಿ ಹನುಮನೂ ಬರುತ್ತಾನೆ! ಒಂದು ಮಂತ್ರವನ್ನು ಪಠಿಸಿದಾಗ ಇಬ್ಬರು ದೇವತೆಗಳು ಬರುವ ಏಕೈಕ ಮಂತ್ರ ಇದು ಎಂದು ಖ್ಯಾತವಾಗಿದೆ. ಅಯೋಧ್ಯೆಯಲ್ಲಿ ಮಂದಿರ ಉದ್ಘಾಟನೆಯಾಗುವ ಹೊತ್ತಿನಲ್ಲೇ ಈ ಮಂತ್ರದ ಪಠಣ ದೇಶಾದ್ಯಂತ ತಾರಕಕ್ಕೇರಿದೆ!

Advertisement

Udayavani is now on Telegram. Click here to join our channel and stay updated with the latest news.

Next