Advertisement

ಶ್ರೀರಾಮ ಸೇನೆ ಮುಖಂಡ ರಾಕೇಶ್‌ ಮಠ ವಿಚಾರಣೆ

06:40 AM Jun 17, 2018 | Team Udayavani |

ಬೆಂಗಳೂರು: ಗೌರಿ ಹತ್ಯೆ ಪ್ರಕರಣ ಸಂಬಂಧ ವಿಜಯಪುರ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಾಕೇಶ್‌ ಮಠ ಶನಿವಾರ ಎಸ್‌ಐಟಿ ವಿಚಾರಣೆಗೆ ಹಾಜರಾದರು.

Advertisement

ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಐಡಿ ಆವರಣದಲ್ಲಿರುವ ಎಸ್‌ಐಟಿ ಕಚೇರಿಗೆ ಆಗಮಿಸಿದ ರಾಕೇಶ್‌ ಮಠ ಅವರನ್ನು ತಡರಾತ್ರಿ 9 ಗಂಟೆವರೆಗೂ ಅಧಿಕಾರಿಗಳು ವಿಚಾರಣೆ ನಡೆಸಿದರು.

ವಿಚಾರಣೆ ಸಂದರ್ಭದಲ್ಲಿ ಎಷ್ಟು ವರ್ಷಗಳಿಂದಪರಶುರಾಮ ಜತೆ ಸಂಪರ್ಕದಲ್ಲಿದ್ದೀರಾ? ಯಾವ  ಯಾವ ವಿಚಾರಗಳ ಬಗ್ಗೆ ಆತ ಮಾತನಾಡುತ್ತಿದ್ದ? ಪರಶುರಾಮ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಯಾರು? ಇಬ್ಬರು ನೆರೆ ರಾಜ್ಯದವರು ಪರಶುರಾಮ ಜತೆ ಚರ್ಚಿಸಿದ್ದರು, ಅವರು ಯಾರೆಂದು ಗೊತ್ತಿದೆಯೇ? ಗೌರಿ ಬಗ್ಗೆ ಪರಶುರಾಮ ಚರ್ಚೆ ನಡೆಸಿದ್ದರಾ ಎಂಬುದು ಸೇರಿ 100ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ರಾಕೇಶ್‌, ಪರಶುರಾಮ ಹಲವು ವರ್ಷಗಳಿಂದ ಪರಿಚಯ. ಗೌರಿ ಹತ್ಯೆ ಬಳಿಕವೂ ನನ್ನ ಜತೆ ಮಾತನಾಡುತ್ತಿದ್ದ.ವಾರಕ್ಕೊಮ್ಮೆ ಪ್ರಕರಣದ ಬಗ್ಗೆ ಚರ್ಚಿಸುತ್ತಿದ್ದ. ಆ ಬಳಿಕವೂ ನಾವು ಹಿಂದೂ ಸಮಾವೇಶಗಳನ್ನು ಆಯೋಜಿಸಿದ್ದೆವು. ಕಟು ಹಿಂದುತ್ವವಾದಿಯಾಗಿದ್ದ ಆತ ಸಂಘಟನೆ ನೇತೃತ್ವ ವಹಿಸುತ್ತಿದ್ದ. ಅನ್ಯಧರ್ಮೀಯರ ಭಾಷಣದ ಬಗ್ಗೆ ವಿರೋಧಿಸುತ್ತಿದ್ದ ಎಂದು ಮಾಹಿತಿ ನೀಡಿದ್ದಾರೆ.

ಗೌರಿಯನ್ನು ವಿರೋಧಿಸುತ್ತೇನೆ: ಗೌರಿ ದೇಶದ್ರೋಹಿಗಳಿಗೆ ಬೆಂಬಲ ನೀಡಿದ್ದರು. ಹೀಗಾಗಿ ಅವರನ್ನು ನಾನು ವಿರೋಧಿಸುತ್ತೇನೆ. ಆದರೆ, ಹಿಂದೂ ಆಗಿ ಆಕೆಯ ಹತ್ಯೆಯನ್ನು ಖಂಡಿಸುತ್ತೇನೆಂದು ರಾಕೇಶ್‌ ಹೇಳಿದ್ದಾರೆ. ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪರಶುರಾಮನನ್ನು ಹೊಗಳಿದ ವಿಚಾರ ಪ್ರಸ್ತಾಪಿಸಿದಾಗ, ನಾನು ಹಿಂದು. ಆ ರೀತಿ
ಬರೆಯುವುದು ನನ್ನ ಹಕ್ಕು ಎಂದು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.

Advertisement

ಇದಕ್ಕೆ ಗರಂ ಆದ ತನಿಖಾಧಿಕಾರಿಗಳು, ಪರಶುರಾಮ ಯಾರೊಂದಿಗೆ ಕೃತ್ಯದಲ್ಲಿ ಪಾಲ್ಗೊಂಡಿದ್ದ ಎಂಬುದನ್ನು ಬಾಯಿ ಬಿಡಬೇಕು. ಇಲ್ಲವಾದರೆ ಪ್ರಕರಣದಲ್ಲಿ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಬಳಿಕ ಕೆಲ ಸನ್ನಿವೇಶಗಳನ್ನು ರಾಕೇಶ್‌ ಹಂಚಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಪರಶುರಾಮ ಅಮಾಯಕ: ಇದಕ್ಕೂ ಮೊದಲು ಮಾಧ್ಯಮಗಳ ಜತೆ ಮಾತನಾಡಿದ ರಾಕೇಶ್‌ ಮಠ, ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಾಜರಾಗಿದ್ದೇನೆ. ದೇಶ ರಕ್ಷಣೆ,ಧರ್ಮ ರಕ್ಷಣೆಗೆ ಹೋರಾಡುವುದು ತಪ್ಪಾ? ಪರಶುರಾಮನನ್ನು ಕೊಲೆಗಾರ ಎಂದು ಬಿಂಬಿಸುವುದು ತಪ್ಪು. ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಆತನನ್ನು ಕೊಲೆಗಾರ ಎಂದು ಹೇಳಲು ಸಾಧ್ಯವಿಲ್ಲ. ಪರಶುರಾಮನನ್ನು ಸಮರ್ಥಿಸಿಕೊಂಡು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿಲ್ಲ. ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಅದಕ್ಕೆ ಸಹಾಯ ಮಾಡಲು ಕೋರಿ ಪೋಸ್ಟ್‌ ಮಾಡಿದ್ದೆ. ಎಸ್‌ಐಟಿ ಯಾವುದೇ ರೀತಿಯ ತನಿಖೆಗೆ ಸಹಕರಿಸುತ್ತೇನೆ ಎಂದರು.

ಪೋಷಕರ ಆತಂಕ
ಎಸ್‌ಐಟಿ ಕಚೇರಿಗೆ ಆಗಮಿಸಿದ ಪರಶುರಾಮ ತಂದೆ ಅಶೋಕ ವಾಗ್ಮೋರೆ ಮತ್ತು ಮಾವ ಅಶೋಕ ಕಾಂಬ್ಳೆ ಪುತ್ರನನ್ನು ನೆನೆದು ಭಾವುಕರಾದರು. ಬಳಿಕ ಅಶೋಕ ವಾಗ್ಮೋರೆ ಪುತ್ರನನ್ನು ಭೇಟಿಯಾಗಿ ಬುದಿಟಛಿವಾದ ಹೇಳಿದ್ದಲ್ಲದೇ, ಸಂಘಟನೆ ಎಂದು ಹೇಳಿಕೊಂಡು ಮನೆಯನ್ನೇ ಮರೆತು ಬಿಟ್ಟೆ ನೀನು. ನಮಗೆ ಇನ್ಯಾರು ದಿಕ್ಕು ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಗನನ್ನು ನೋಡಿ ಮಾತನಾಡಿದ್ದೇನೆ. ಐದು ದಿನ ಬಿಟ್ಟು ಮತ್ತೂಮ್ಮೆ ಬರಲು ಹೇಳಿದ್ದಾರೆ. ಆಗ ತಾಯಿಯನ್ನು ಕರೆದುಕೊಂಡು ಬರುವಂತೆ ಮಗ ಪರಶುರಾಮ ಕೇಳಿಕೊಂಡಿದ್ದಾನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next