Advertisement

Ram Mandir: ಘಾಜಿಯಾಬಾದ್‌ ವಿದ್ಯಾರ್ಥಿ ಮಂದಿರದ ಅರ್ಚಕರಾಗಿ ನೇಮಕ

10:28 PM Dec 10, 2023 | Team Udayavani |

ರಾಮ ಮಂದಿರದ ಅರ್ಚಕರಾಗಲು ಆಯ್ಕೆ ಮಾಡಲಾಗಿರುವ 50 ಮಂದಿಯ ಪೈಕಿ ಘಾಜಿಯಾಬಾದ್‌ನ ದುದೇಶ್ವರ ವೇದ ವಿದ್ಯಾಪೀಠದ ವಿದ್ಯಾರ್ಥಿ ಮೋಹಿತ್‌ ಪಾಂಡೆಯೂ ಒಬ್ಬರಾಗಿದ್ದು, ಇವರ ಪರಿಚಯ ಇದೀಗ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Advertisement

7 ವರ್ಷಗಳಿಂದ ದುದೇಶ್ವರ ವೇದ ವಿದ್ಯಾಪೀಠದಲ್ಲಿ ವೇದಗಳ ಅಧ್ಯಾಯನದಲ್ಲಿ ತೊಡಗಿರುವ ಮೋಹಿತ್‌ , ಸಾಮವೇದವನ್ನು ಕಲಿತು ಆಚಾರ್ಯ ಪದವಿಯನ್ನೂ ಪಡೆದಿದ್ದಾರೆ. ಪಿಎಚ್‌ಡಿಗಾಗಿ ಸಿದ್ಧತೆ ನಡೆಸುತ್ತಿದ್ದು, ಇದೀಗ ಮಂದಿರದ ಅರ್ಚಕರಾಗಿ ನೇಮಕಗೊಂಡಿದ್ದಾರೆ. ಇತರೆ ಅರ್ಚಕರ ಜತೆಗೆ ಮುಂದಿನ 6 ತಿಂಗಳು ಮೋಹಿತ್‌ ಕೂಡ ತರಬೇತಿ ಪಡೆದುಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next