Advertisement

ಕೆರೆಗಳ ಸಂರಕ್ಷಣೆಗೆ “ರ್ಯಾಲಿ ಫಾರ್‌ ಲೇಕ್‌’

01:34 PM Dec 26, 2017 | |

ಬೆಂಗಳೂರು: ನಗರದಲ್ಲಿ “ರ್ಯಾಲಿ ಫಾರ್‌ ಲೇಕ್‌’ (ಕೆರೆ ಸಂರಕ್ಷಣೆ ಅಭಿಯಾನ) ಹಮ್ಮಿಕೊಂಡಿರುವ ಬಿ.ಪ್ಯಾಕ್‌ ಪ್ರತಿನಿಧಿಗಳು, ಹೊಸಕೆರೆಹಳ್ಳಿ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಕೆರೆ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಸ್ಥಳೀಯ ನಿವಾಸಿಗಳಲ್ಲಿ ಅರಿವು ಮೂಡಿಸಿದರು. 

Advertisement

ರ್ಯಾಲಿ ನೇತೃತ್ವ ವಹಿಸಿದ್ದ ಗಿರೀಶ್‌ ಪುಟ್ಟಣ್ಣ ಮಾತನಾಡಿ, ಬೆಂಗಳೂರಿನ ಜೀವನಾಡಿಗಳಾಗಿರುವ ಕೆರೆಗಳು ಮಾಯವಾದರೆ ನಗರ ಸ್ಮಶಾನದಂತಾಗುತ್ತದೆ. ಕೆರೆಯಲ್ಲಿ ತ್ಯಾಜ್ಯ ಸುರಿಯದಂತೆ ನೋಡಿಕೊಳ್ಳಬೇಕು ಎಂದರು. ಜಾಥಾ ವೇಳೆ ಸ್ಥಳೀಯ ನಿವಾಸಿಗಳ ಸಹಿ ಸಂಗ್ರಹಿಸಿದ್ದು, ಸಹಿ ಪಡೆದ ಪತ್ರವನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಿ ಕೆರೆ ಒತ್ತುವರಿ ತೆರವುಗೊಳಿಸಿ,

ಮಳೆ ನೀರು ಹರಿಯುವ ಕಾಲುವೆಗಳನ್ನು ಪುನಶ್ಚೇತನಗೊಳಿಸುವಂತೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು. ಈ ವೇಳೆ ಬಿ.ಪ್ಯಾಕ್‌ನ ವೇದಮಾಲಾ, ದಶಮಿ ರಾಣಿ, ಸತೀಶ್‌ ರಾಜನ್‌, ಬೀಮ್‌ರಾಜ್‌, ಅಶ್ವಿ‌ನಿ, ಲಲಿತಾಂಬಾ, ಮಂಜುಳಾ, ಕಾಂತರಾಜ್‌, ರಘು, ರಫಿ, ಫೈರೋಜ್‌, ಕಣ್ಮಣಿ, ವಿನೋದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next