Advertisement
ಮೂರು ದಿನಗಳ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಉಪನ್ಯಾಸ, ಕವಿಗೋಷ್ಠಿ, ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಆರ್. ಶ್ರೀನಿವಾಸ್(ವಾಸು) ಚಾಲನೆ ನೀಡುವರು. ಶಾಸಕ ಶಾಮನೂರು ಶಿವಶಂಕರಪ್ಪ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವರು. ಖ್ಯಾತ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ವಿಶೇಷ ಉಪನ್ಯಾಸ ನೀಡುವರು. ಉಪ ಮೇಯರ್ ಕೆ. ಚಮನ್ಸಾಬ್, ಮಾಜಿ ಶಾಸಕ ಕೆ. ಮಲ್ಲಪ್ಪ, ವರದಿಗಾರರ ಕೂಟದ ಅಧ್ಯಕ್ಷ ಬಿ. ಎನ್. ಮಲ್ಲೇಶ್, ನಾಗೇಂದ್ರ ಬಂಡೀಕರ್ ಇತರರು ಭಾಗವಹಿಸುವರು ಎಂದು ತಿಳಿಸಿದರು. ಶನಿವಾರ ಬೆಳಗ್ಗೆ 11ಕ್ಕೆ ರೋಟರಿ ಬಾಲಭವನದಲ್ಲಿ ಕವಿಗೋಷ್ಠಿ ನಡೆಯಲಿದೆ. ಅಂದು ಸಂಜೆ 5.30ಕ್ಕೆ ಎರಡನೇ ದಿನದ ಕಾರ್ಯಕ್ರಮಕ್ಕೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಚಾಲನೆ ನೀಡಲಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ್, ಉಪ ಮೇಯರ್ ಕೆ. ಚಮನ್ಸಾಬ್, ಮಹಾನಗರ ಪಾಲಿಕೆ ಮಾಜಿ ಸದಸ್ಯಕೆ.ಜಿ. ಶಿವಕುಮಾರ್, ಪತ್ರಕರ್ತರಾದ ಸದಾನಂದ ಹೆಗಡೆ, ಎನ್. ವಿಶಾಖ, ಕೆ.ಏಕಾಂತಪ್ಪ, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಇತರರು ಭಾಗವಹಿಸವರು. ಸಾಹಿತಿ ಲೋಕೇಶ್ ಅಗಸನಕಟ್ಟೆ ವಿಶೇಷ ಉಪನ್ಯಾಸ ನೀಡುವರು ಎಂದು ತಿಳಿಸಿದರು.
Related Articles
ನಗರಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಸದಾ ಕನ್ನಡದ ಧ್ವಜ ಹಾರಿಸುವ ಖ್ಯಾತಿಗೆ ಪಾತ್ರವಾಗಿರುವ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಂಪ್ರತಿ 60 ಎಂಎಲ್ಡಿ ನೀರು ಸರಬರಾಜು, 140 ಟನ್ಗೂ ಅಧಿಕ ಕಸ ವಿಲೇವಾರಿ ಜೊತೆಗೆ ದೈನಂದಿನ ಕೆಲಸ-ಕಾರ್ಯಗಳ ಒತ್ತಡದ ನಡುವೆಯೂ ಕನ್ನಡ ರಾಜ್ಯೋತ್ಸವವನ್ನ ಅದ್ಧೂರಿಯಾಗಿ ಆಚರಿಸಿಕೊಂಡು ಬರುತ್ತಿದೆ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಾಲ್ಕು ಕಡೆ ಪ್ರವೇಶ ದ್ವಾರಗಳಿಗೆ ಡಾ| ರಾಜ್ಕುಮಾರ್, ಡಾ| ವಿಷ್ಣುವರ್ಧನ್, ಶಂಕರ್ನಾಗ್, ಚಿಂದೋಡಿ ಲೀಲಾ ಹೆಸರಿಡಲಾಗಿದೆ.
Advertisement
ಪ್ರಥಮ ದಿನ ವೇದಿಕೆಗೆ ಮಾಜಿ ಶಾಸಕ ಪಂಪಾಪತಿ, ಎರಡನೇ ದಿನ ನಗರಸಭೆ ಮಾಜಿ ಅಧ್ಯಕ್ಷ ಜೆ. ಗಣೇಶರಾವ್, ಮೂರನೇ ದಿನ ಜಂಬಗಿ ಶರಣಪ್ಪ ಹೆಸರಿಡಲಾಗುವುದು ಎಂದು ತಿಳಿಸಿದರು. ನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ತಿಪ್ಪಣ್ಣ, ನಗರಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್, ಕೆ.ಜಿ. ಯಲ್ಲಪ್ಪ, ಎ. ನಾಗರಾಜ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಶಸ್ತಿ ಆಯ್ಕೆ ಪಟ್ಟಿಗೆ ಆಕ್ಷೇಪದಾವಣಗೆರೆ: 63ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಈ ಬಾರಿ ಮಹಾನಗರಪಾಲಿಕೆಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಅವೈಜ್ಞಾನಿಕವಾಗಿದೆ ಎಂದು ಅಖಂಡ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು. ಗುರುವಾರ, ಮಹಾನಗರಪಾಲಿಕೆ ಮುಂಭಾಗ ಪ್ರತಿಭಟಿಸಿದ ಕಾರ್ಯಕತರು, ಪ್ರತಿವರ್ಷ ಮಹಾನಗರ ಪಾಲಿಕೆಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನ ಸನ್ಮಾನಿಸುವುದು ವಾಡಿಕೆ. ಆದರೆ ಈ ಸಾಧಕರನ್ನು ಆಯ್ಕೆ ಮಾಡುವ ಸಮಿತಿಯು ಜೇಷ್ಠತೆ ಮತ್ತು ಶ್ರೇಷ್ಠತೆ ಪರಿಗಣಿಸಿ ಆಯ್ಕೆ ಮಾಡುವ ಬದಲು ತಮ್ಮಗಿಷ್ಟದಂತೆ ಈ ಬಾರಿ ಆಯ್ಕೆ ಮಾಡಿದೆ. ಹಾಗಾಗಿ ಅರ್ಹರು ಪ್ರಶಸ್ತಿಗೆ ಭಾಜನರಾಗಲು ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು. ಪ್ರಶಸ್ತಿಗೆ ತನ್ನದೇ ಆದ ಶ್ರೇಷ್ಠತೆ ಇರುವುದರಿಂದ ಕೂಡಲೇ ಈ ಅವೈಜ್ಞಾನಿಕ ಆಯ್ಕೆ ಪ್ರಕ್ರಿಯೆಯನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಪ್ರತಿಭಟನಾಕಾರರು ಪಾಲಿಕೆಗೆ ಒತ್ತಾಯಿಸಿದರು. ವೇದಿಕೆ ರಾಜ್ಯಾಧ್ಯಕ್ಷ ಎಸ್.ಜಿ.ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ಟಿ.ಆರ್. ಸುರೇಶ್, ಕಾರ್ಯದರ್ಶಿ ಇಮ್ರಾನ್ ರಜಾಕ್, ಖಜಾಂಚಿ ಎಲ್. ದೇವರಾಜ್, ಮಹಮ್ಮದ್ ಗುಲಾಮ್, ಶಬೀºರ್, ಡಿ.ಎನ್. ಅಲ್ತಾಫ್, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.