Advertisement

ರಾಜ್ಯಸಭಾ ಚುನಾವಣೆ ಮುಂದೂಡಲು ಆಯೋಗ ನಿರ್ಧಾರ

11:18 AM Mar 27, 2020 | Hari Prasad |

ಹೊಸದಿಲ್ಲಿ: ಮಾ. 26ರಂದು ನಿಗದಿಯಾಗಿದ್ದ ರಾಜ್ಯಸಭಾ ಚುನಾವಣೆಯನ್ನು ಮುಂದೂಡಿರುವುದಾಗಿ ಚುನಾವಣ ಆಯೋಗ ಮಂಗಳವಾರ ತಿಳಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Advertisement

ಮಾ. 31ರ ಅನಂತರ ಚುನಾವಣೆಯ ದಿನಾಂಕದ ಕುರಿತು ನಿರ್ಣಯ ಕೈಗೊಳ್ಳಬೇಕು  ಎಂದು ಚುನಾವಣಾ ಆಯುಕ್ತರಾದ ಅಶೋಕ್‌ ಲಾವಸ ಮತ್ತ ಸುಶೀಲ್‌ ಚಂದ್ರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ವಿಷಮ ಪರಿಸ್ಥಿತಿಯಲ್ಲಿ ನಾವು ಶಾಸಕರನ್ನು ತೊಂದರೆಗೀಡುಮಾಡಬಾರದು. ಚುನಾವಣ ಪ್ರಕ್ರಿಯೆಗೆ ಅಗತ್ಯವಾಗಿ ಚುನಾವಣ ಅಧಿಕಾರಿಗಳು ಮತ್ತು ಸಿಬಂದಿ ಒಂದೆಡೆ ಸೇರ ಲೇಬೇಕಾಗುತ್ತದೆ.

ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಒಂದೆಡೆ ಗುಂಪು ಸೇರುವುದು ಅಪಾಯವಾದ್ದರಿಂದ ಚುನಾವಣ ಆಯೋಗ ಚುನಾವಣೆ ಮುಂದೂಡಲು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next