Advertisement

ಡಿ.12ಕ್ಕೆ ರಾಜ್ಯಸಭಾ ಸದಸ್ಯ ಸ್ಥಾನ ಉಪಚುನಾವಣೆ

09:45 AM Nov 15, 2019 | Team Udayavani |

ನವದೆಹಲಿ: ಕರ್ನಾಟಕ ಹಾಗೂ ಉತ್ತರಪ್ರದೇಶದಲ್ಲಿ ತೆರವಾಗಿದ್ದ ಎರಡು ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಘೋಷಿಸಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರು.

Advertisement

ಉತ್ತರ ಪ್ರದೇಶದಲ್ಲಿ ರಾಜ್ಯಸಭಾ ಸದಸ್ಯೆ ತಜೀನ್‌ ಫಾತ್ಮಾ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಎರಡು ಸ್ಥಾನಕ್ಕಾಗಿ ಡಿ.12 ಮತದಾನ ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ರಾಮಮೂರ್ತಿ ರಾಜ್ಯಸಭಾ ಸ್ಥಾನದ ಅವಧಿ 2022 ಜೂ.30 ಹಾಗೂ ತಜೀನ್‌ ಫಾತ್ಮಾ ಅವಧಿ 2020 ನವೆಂಬರ್‌ 25ಕ್ಕೆ ಅಂತ್ಯವಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next