Advertisement

ಬಿಜೆಪಿಗೆ ರಾಜು ಕಾಗೆ ಗುಡ್ ಬೈ : ಕಾಂಗ್ರೆಸ್ ಕಡೆ ಒಲವು

09:57 AM Nov 12, 2019 | Team Udayavani |

ಬೆಂಗಳೂರು: ನಾನು ಬಿಜೆಪಿಯಿಂದ ಹೊರ ಬಂದಿದ್ದೇನೆ.  ಬಿಜೆಪಿಗೆ ರಾಜೀನಾಮೆ ‌ನೀಡಿದ್ದೇನೆ, ರಾಜ್ಯ ಕಚೇರಿಗೇ ರಾಜೀನಾಮೆ ಪತ್ರ  ಕಳಿಸಿದ್ದೇನೆ . ನಾನು ನ.13 ಕ್ಕೆ ಕಾಂಗ್ರೆಸ್ ಪಕ್ಷ ಸೇರಿಕೊಳ್ಳುತ್ತೇನೆ ಎಂದು ಮಾಜಿ ಶಾಸಕ ರಾಜು ಕಾಗೆ ಹೇಳಿದರು.

Advertisement

ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತಾನಾಡಿದ ಅವರು ಈಗಾಗಲೇ ಸಿದ್ದರಾಮಯ್ಯ, ಡಿಕೆಶಿ ಹಾಗೂ ದಿನೇಶ್ ಗುಂಡೂರಾವ್ ಭೇಟಿ ಮಾಡಿ ಮಾತಾಕತೆ ನಡೆಸಿದ್ದೇನೆ. ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್‌ಕೊಡುವ ಭರವಸೆ ನೀಡಿದ್ದಾರೆ.

ಕುಮಾರಸ್ವಾಮಿಯನ್ನು  ಇನ್ನೂ ಭೇಟಿ‌ಮಾಡಿಲ್ಲ, ಮುಂದೆ ಭೇಟಿ ಮಾಡುತ್ತೇನೆ, ಕುಮಾರಸ್ವಾಮಿ ನನ್ನ ಉತ್ತಮ ಸ್ನೇಹಿತರು. ಅವರೂ ಬೆಂಬಲ‌ ಕೊಡುತ್ತಾರೆ ಅನ್ನುವ ಭರವಸೆ ಇದೆ ಎಂದರು.

ಮತ್ತೆ ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಇದು ನನ್ನ ರಾಜಕೀಯ ಭವಿಷ್ಯದ ಪ್ರಶ್ನೆ. ಈಗ ನಾನು ಮನೆಯಲ್ಲಿ‌ ಕೂತರೆ, ಜೀವನಪರ್ಯಂತ ಮನೆಯಲ್ಲಿ‌‌ ಕೂರಬೇಕು. ಯಡಿಯೂರಪ್ಪ ಒಮ್ಮೆ ಮಾತುಕತೆ ಮಾಡಿದರು, ಈಗ ನೀನು ಸುಮ್ಮನಿರು, ನಿನಗೆ ನಿಗಮ ಮಂಡಳಿ‌ಕೊಡುತ್ತೇನೆ‌ ಅಂದಿದ್ದರು. ಯಡಿಯೂರಪ್ಪ ಮಾತು ಕೇಳಿ ಸುಮ್ಮನಾದೆ. ಆದರೆ ಈಗ ಶ್ರೀಮಂತ ಪಾಟೀಲ್ ಗೆಲ್ಲಿಸಿಕೊಂಡು ಬನ್ನಿ ಅನ್ನುತ್ತಿದ್ದಾರೆ. ಇದು ನನ್ನಿಂದ ಆಗದ ಮಾತು ಅಂದೆ. ಈಗ ಎಲ್ಲವೂ ಮುಗಿದ ಅಧ್ಯಾಯ. ನನಗೆ ಮುಖ್ಯಮಂತ್ರಿ ಪದವಿ ಕೊಟ್ಟರೂ ನಾನು ಬಿಜೆಪಿ ಹೋಗಲ್ಲ  ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next