Advertisement

ರಕ್ಷಣಾ ಸಚಿವರಾಗಿ ರಾಜನಾಥ್‌ ಪದಗ್ರಹಣ

12:47 AM Jun 02, 2019 | Team Udayavani |

ಹೊಸದಿಲ್ಲಿ: ರಕ್ಷಣಾ ಸಚಿವರಾಗಿ ನೇಮಕಗೊಂಡಿರುವ ರಾಜನಾಥ್‌ ಸಿಂಗ್‌ ಅವರು, ಶನಿವಾರ ಅಧಿಕಾರ ಸ್ವೀಕರಿಸಿದರು. ಬೆಳಗ್ಗೆಯೇ ತಮ್ಮ ಕಚೇರಿಗೆ ಆಗಮಿಸಿದ ಅವರನ್ನು ಇಲಾಖೆಯ ಸಹಾಯಕ ಸಚಿವರಾಗಿ ನೇಮಕಗೊಂಡಿರುವ ಶ್ರೀಪಾದ್‌ ನಾಯಕ್‌, ಇಲಾಖೆಯ ಕಾರ್ಯದರ್ಶಿ ಸಂಜಯ್‌ ಮಿತ್ರ ಹಾಗೂ ಇತರ ಹಿರಿಯ ಅಧಿಕಾರಿಗಳು ಹೂಗುತ್ಛ ನೀಡಿ ಸ್ವಾಗತಿಸಿದರು. ಅನಂತರ, ಸೇನಾಧಿಕಾರಿ ಬಿಪಿನ್‌ ರಾವತ್‌, ವಾಯುಪಡೆಯ ಮುಖ್ಯಸ್ಥ ಬಿ.ಎಸ್‌. ಧನೋವಾ ಹಾಗೂ ನೌಕಾಪಡೆಯ ನೂತನ ಮುಖ್ಯಸ್ಥ ಕರಂಬಿರ್‌ ಸಿಂಗ್‌ ಜತೆಗೆ ಸಚಿವರು ಸಮಾಲೋಚನೆ ನಡೆಸಿದರು. ಈ ಸಭೆಯಲ್ಲಿ ಕಾರ್ಯದರ್ಶಿ ಸಂಜಯ್‌ ಮಿತ್ರಾ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶನಿವಾರ ಸೌತ್‌ ಬ್ಲಾಕ್‌ಗೆ ಭೇಟಿ ನೀಡಿದಾಗ, ಅವರನ್ನು ಭೂಸೇನಾ ಮುಖ್ಯಸ್ಥ ಜ|ಬಿಪಿನ್‌ ರಾವತ್‌ ಹಾಗೂ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕರಂಬೀರ್‌ ಸಿಂಗ್‌ ಆತ್ಮೀಯವಾಗಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next