Advertisement
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ರಾಜ್ಕುಮಾರ್ 90ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ಹಾಗೂ ಕನ್ನಡ ನುಡಿಯ ಏಕೀಕರಣದಲ್ಲಿ ಡಾ.ರಾಜ್ಕುಮಾರ್ ಕೊಡುಗೆ ಅಪಾರವಾಗಿದೆ. ತಮ್ಮ ಚಿತ್ರಗಳ ಮೂಲಕ ನಾಡಿನೆಲ್ಲೆಡೆ ಸಂಸ್ಕೃತಿ ಪಸರಿಸಿದ ಅವರು ಸಾಂಸ್ಕೃತಿಕ ಐಕಾನ್ ಆಗಿದ್ದಾರೆ ಎಂದು ಹೇಳಿದರು.
Related Articles
Advertisement
ಅಪ್ಪಾಜಿ ಸಂಪನ್ಮೂಲಗಳ ಕುರಿತು ಹೆಚ್ಚು ಕಾಳಜಿ ಹೊಂದಿದ್ದರು. ತಾನು ಇರುವಲ್ಲಿ ನೀರು ಹಾಗೂ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳುತ್ತಿದ್ದರು. ಇನ್ನು ಅಪ್ಪಾಜಿ ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು, ಹಾಗಾಗಿ ಅವರ ನೆನೆಪಿನಲ್ಲಿ ರಾಜ್ಕುಮಾರ್ ಐಎಎಸ್ ಅಕಾಡೆಮಿಯನ್ನು ಆರಂಭಿಸಿದ್ದು, ಇಂದು 800 ವಿದ್ಯಾರ್ಥಿಗಳು ಉಚಿತವಾಗಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್, ಸಾಹಿತಿ ಬರಗೂರು ರಾಮಚಂದ್ರಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ನಟ ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಸೇರಿದಂತೆ ರಾಜ್ ಕುಟುಂಬ ಸದಸ್ಯರು, ನಟ ನಟಿಯರು ಉಪಸ್ಥಿತರಿದ್ದರು.
ಗೀತ ಗಾಯನ: ಕಾರ್ಯಕ್ರಮದಲ್ಲಿ ಗಾಯಕಿ ಮಂಜುಳಾ ಗುರುರಾಜ್, ಸುನಿತಾ, ಗಾಯಕ ಮೋಹನ್ ಅವರಿಂದ ಡಾ.ರಾಜ್ಕುಮಾರ್ ಚಿತ್ರಗಳ ಗೀತಗಾಯನವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಟ ಶಿವರಾಜ್ಕುಮಾರ್ ನಾ ನಿನ್ನ ಮರೆಯಲಾರೆ ಹಾಗೂ ಪುನೀತ್ ಬೊಂಬೆ ಹೇಳುತೈತೇ ಹಾಡನ್ನು ಹಾಡಿದರು.
-ನಗರದೆಲ್ಲಡೆ ನಟ ಸಾರ್ವಭೌಮನ ಸಂಭ್ರಮದ ಜನ್ಮದಿನಾಚರಣೆ-ಡಾ.ರಾಜ್ರಂತೆ ಸ್ಪಷ್ಟ ಕನ್ನಡ ಉಚ್ಛಾರ ಇಂದೀಗೂ ಯಾರಲ್ಲೂ ಕಂಡಿಲ್ಲ
-ರವೀಂದ್ರ ಕಲಾಕ್ಷೇತ್ರದಲ್ಲಿ ವರನಟನ ಅದ್ಧೂರಿ 90ನೇ ಜನ್ಮದಿನಾಚರಣೆ
-ರಾಘವೇಂದ್ರ ರಾಜ್ಕುಮಾರ್, ಶಿವರಾಜ್ಕುಮಾರ್ ಪುನೀತ್ ಭಾಗಿ