Advertisement

ಮೂರನೇ ದಿನದ ವಿಧಿ ವಿಧಾನಗಳನ್ನು ಪೂರೈಸಿದ ರಾಜ್‌ಕುಮಾರ್‌ ಕುಟುಂಬ 

12:48 PM Jun 03, 2017 | Team Udayavani |

ಬೆಂಗಳೂರು: ಬುಧವಾರ ನಿಧನರಾಗಿದ್ದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್‌ ಅವರ ಸಮಾಧಿ ಬಳಿ ತೆರಳಿ ಅವರ ಕುಟುಂಬ ವರ್ಗ ಶುಕ್ರವಾರ  ಪೂಜೆ ನೆರವೇರಿಸಿತು. ಬೆಳಗ್ಗೆ ಸುಮಾರು 11.30 ರಲ್ಲಿ ಕಂಠೀರವ ಸ್ಟುಡಿಯೋಗೆ ತೆರಳಿದ ಪಾರ್ವತಮ್ಮ ರಾಜಕುಮಾರ್‌ ಕುಟುಂಬ ಹಾಲು ತುಪ್ಪ ಬಿಡುವ ಕಾರ್ಯ ನೆರವೇರಿಸಿತು.

Advertisement

ಹಿರಿಯ ಪುತ್ರ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ಹಾಗೂ ಪುನೀತ್‌ರಾಜಕುಮಾರ್‌ ಸಹೋದರರು, ಸಮಾಧಿಗೆ ಪೂಜೆ ಸಲ್ಲಿಸಿ, ಹಾಲು ತುಪ್ಪ ಬಿಟ್ಟರು. ಈ ಸಂದರ್ಭದಲ್ಲಿ ರಾಜ್‌ ಕುಟುಂಬ ವರ್ಗ, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ರಾಮ್‌ಕುಮರ್‌, ರಾಮು,

-ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಪಾರ್ವತಮ್ಮ ಸಹೋದರರಾದ ಚೆನ್ನೇಗೌಡ, ಎಸ್‌.ಎ.ಗೋವಿಂದರಾಜ್‌, ಕಲಾವಿದ ಹೊನ್ನವಳ್ಳಿ ಕೃಷ್ಣ, ಹಾಗೂ ಪಾರ್ವತಮ್ಮ ರಾಜಕುಮಾರ್‌ ಅವರ ಮೊಮ್ಮಕ್ಕಳು, ಅಭಿಮಾನಿಗಳು ಉಪಸ್ಥಿತರಿದ್ದರು. ಹನ್ನೊಂದನ್ನೆ ದಿನಕ್ಕೆ ತಿಥಿ ಕಾರ್ಯ ನಡೆಸಲು ರಾಜ್‌ ಕುಟುಂಬ ತಯಾರಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next