Advertisement

Rajastan: ಹುದ್ದೆ ಭರ್ತಿ, 450 ರೂ.ಗೆ ಸಿಲಿಂಡರ್‌- ಬಿಜೆಪಿ ವಾಗ್ಧಾನ

12:04 AM Nov 17, 2023 | Team Udayavani |

ಜೈಪುರ: ರಾಜಸ್ಥಾನ ಚುನಾವಣೆಯಲ್ಲಿ ಮತದಾರರ ಒಲುಮೆ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಹಲವು ಭರವಸೆಗಳನ್ನು ನೀಡಿದೆ. ಉಜ್ವಲಾ ಯೋಜನೆ ಫ‌ಲಾನುಭವಿಗಳಿಗೆ 450 ರೂ.ಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌, ಐದು ವರ್ಷಗಳ ಅವಧಿಯಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ, ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಅಡಿಯಲ್ಲಿ ರೈತರಿಗೆ ನೀಡುವ ವಿಮೆ ಮೊತ್ತವನ್ನು 12 ಸಾವಿರ ರೂ.ಗಳಿಗೆ ಏರಿಕೆ ಮಾಡುವುದಾಗಿ ಬಿಜೆಪಿ ವಾಗ್ಧಾನ ಮಾಡಿದೆ.

Advertisement

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಪ್ರಣಾಳಿಕೆ, “ಸಂಕಲ್ಪ ಪತ್ರ’ವನ್ನು ಬಿಡುಗಡೆ ಮಾಡಿದರು. ಪ್ರತಿ ಕ್ವಿಂಟಲ್‌ ಗೋಧಿ ಖರೀದಿಗೆ 2,700 ರೂ. ನೀಡುವ ಬಗ್ಗೆ ಕೂಡ ಪಕ್ಷ ಭರವಸೆ ನೀಡಿದೆ. ಪೂರ್ವ ರಾಜಸ್ಥಾನದ 14 ಜಿಲ್ಲೆಗಳಿಗೆ ನೀರುಣಿಸಲು ಅಗತ್ಯವಾಗಿರುವ ಮಹತ್ವದ ಪೂರ್ವ ರಾಜಸ್ಥಾನ ಕಾಲುವೆ ಯೋಜನೆಯನ್ನು ಪೂರ್ತಿಗೊಳಿಸುವುದಾಗಿಯೂ ಹೇಳಿಕೊಂಡಿದೆ.

ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರಕಾರ ಈ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಬೇಕು ಎಂದು ಹಲವು ಬಾರಿ ಮನವಿ ಮಾಡಿಕೊಂಡಿತ್ತು. ಪ್ರತಿ ಜಿಲ್ಲೆಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಪೊಲೀಸ್‌ ಠಾಣೆಗಳನ್ನು ಸ್ಥಾಪನೆ ಮಾಡುವುದರ ಬಗ್ಗೆಯೂ ಬಿಜೆಪಿ ಹೇಳಿಕೊಂಡಿದೆ. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿಯಲ್ಲಿ ನೀಡುವ ಮೊತ್ತವನ್ನು 5 ಸಾವಿರ ರೂ.ಗಳಿಂದ 8 ಸಾವಿರ ರೂ.ಗಳಿಗೆ ಏರಿಕೆ ಮಾಡುವ ಆಶ್ವಾಸನೆಯನ್ನು ಪಕ್ಷ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next