Advertisement

Rajasthan: ವಾರ ಹಿಂದೆ ಸಂಪುಟ ಸೇರಿದ ಸಚಿವಗೆ ಉಪಚುನಾವಣೆಯಲ್ಲಿ ಸೋಲು!

01:11 AM Jan 09, 2024 | Team Udayavani |

ಜೈಪುರ: ರಾಜಸ್ಥಾನ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಸುರೇಂದ್ರ ಪಾಲ್‌ ಸಿಂಗ್‌ ಕರಾನ್ಪುರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಹೀಗಾಗಿ ಡಿ.30ರಂದು ಪ್ರಮಾಣ ವಚನ ಸ್ವೀಕರಿಸಿದ್ದ ಭಜನ್‌ಲಾಲ್‌ ಶರ್ಮಾ ನೇತೃತ್ವದ ಬಿಜೆಪಿ ಸರಕಾರ ಭಾರೀ ಮುಜುಗರ ಅನುಭವಿಸುವಂತಾಗಿದೆ.

Advertisement

ಜ.5ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಸೋಮವಾರ ನಡೆದಿದ್ದು, ಸಚಿವ ಸಿಂಗ್‌ ಅವರು ಕಾಂಗ್ರೆಸ್‌ ಪ್ರತಿಸ್ಪರ್ಧಿ ವಿರುದ್ಧ 11,283 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. 2018ರಲ್ಲಿ ಕೂಡ ಸಚಿವ ಸಿಂಗ್‌ ಅವರು ಗುರ್ಮೀತ್‌ ಸಿಂಗ್‌ ವಿರುದ್ಧ ಸೋತಿದ್ದರು. ಇತ್ತೀಚೆಗೆ ಮುಕ್ತಾಯಗೊಂಡಿದ್ದ ಪಂಚ ರಾಜ್ಯ ಚುನಾವಣೆ ವೇಳೆ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಗುರ್ಮೀತ್‌ ಸಿಂಗ್‌ ಕುನಾರ್‌ ನಿಧನರಾಗಿದ್ದ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next